ಮೇಡಮ್ ಟುಸ್ಸಾಡ್ಸ್ ಮೇಣದ ಸಂಗ್ರಹಾಲಯದಲ್ಲಿ ಬಾಬಾ ರಾಮ್ ದೇವ್ ಪ್ರತಿಮೆ 
ದೇಶ

ಮೇಡಮ್ ಟ್ಯುಸಾಡ್ಸ್ ನಲ್ಲಿ ಮೊದಲ ಬಾರಿಗೆ ಯೋಗ ಗುರುಗಳ ಮೇಣದ ಪ್ರತಿಮೆ!

ಖ್ಯಾತ ಯೋಗಗುರು ಬಾಬಾ ರಾಮದೇವ್​ ಅವರ ಮೇಣದ ಪ್ರತಿಮೆಯನ್ನು ಲಂಡನ್​ನ ಪ್ರತಿಷ್ಠಿತ ಮೇಡಮ್ ಟುಸ್ಸಾಡ್ಸ್ ಮೇಣದ ಸಂಗ್ರಹಾಲಯದಲ್ಲಿ ನಿರ್ಮಿಸಲಾಗಿದೆ.

ನವದೆಹಲಿ: ಖ್ಯಾತ ಯೋಗಗುರು ಬಾಬಾ ರಾಮದೇವ್​ ಅವರ ಮೇಣದ ಪ್ರತಿಮೆಯನ್ನು ಲಂಡನ್​ನ ಪ್ರತಿಷ್ಠಿತ ಮೇಡಮ್ ಟುಸ್ಸಾಡ್ಸ್ ಮೇಣದ ಸಂಗ್ರಹಾಲಯದಲ್ಲಿ ನಿರ್ಮಿಸಲಾಗಿದೆ. 
ಆ ಮೂಲಕ ಲಂಡನ್ ಪ್ರತಿಷ್ಠಿತ ಮೇಡಮ್ ಟುಸ್ಸಾಡ್ಸ್ ಮೇಣದ ಸಂಗ್ರಹಾಲಯದಲ್ಲಿ ಭಾರತ ಮೂಲದ ಯೋಗಿ ಯೊಬ್ಬರ ಮೇಣದ ಪ್ರತಿಮೆಯನ್ನು ಇದೇ ಮೊದಲ ಬಾರಿಗೆ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಮೊಟ್ಟ ಮೊದಲ ಬಾರಿಗೆ ಯೋಗಿಯೊಬ್ಬರ ಮೇಣದ ಪ್ರತಿಮೆಯ ಗರಿಮೆಗೆ ರಾಮ್​ದೇವ್​ ಪಾತ್ರರಾಗಿದ್ದಾರೆ.
ಇತ್ತೀಚೆಗಷ್ಟೇ ರಾಮ್​ದೇವ್​ ಅವರು ಲಂಡನ್​ಗೆ ತೆರಳಿದ್ದಾಗ ಅವರ ಸಂಪೂರ್ಣ ಅಳತೆಯನ್ನು ಸಂಗ್ರಹಾಲಯದಲ್ಲಿ ತೆಗೆದುಕೊಳ್ಳಲಾಗಿತ್ತು. ಇದೀಗ ನಿರ್ಮಾಣವಾಗಿರುವ ಪ್ರತಿಮೆ ಬಗ್ಗೆ ಟ್ವೀಟ್​ ಮಾಡಿರುವ ಬಾಬಾ ರಾಮ್​ದೇವ್​ ಅವರು ಜಗತ್ತಿನಾದ್ಯಂತ ಎಲ್ಲರನ್ನೂ ಆರೋಗ್ಯದಾಯಕ ಜೀವನಶೈಲಿ ಯೋಗದ ಕಡೆಗೆ ಕರೆದೊಯ್ಯಲು ಈ ಪ್ರತಿಮೆ ಸ್ಫೂರ್ತಿದಾಯಕವಾಗಿರುತ್ತದೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಕೆಲವು ತಿಂಗಳುಗಳ ಹಿಂದೆಯೇ ಸಂಗ್ರಹಾಲಯದ ಅಧಿಕಾರಿಗಳಿಂದ ರಾಮ್​ದೇವ್​ ಅವರ ಪ್ರತಿಮೆ ನಿರ್ಮಿಸಲು ವಿನಂತಿಸಿಕೊಂಡಿದ್ದರು. ನಂತರ ಅವರನ್ನು ಹಲವು ಪ್ರಸ್ತಾಪಗಳೊಂದಿಗೆ ಮನವೊಲಿಸಲಾಯಿತು ಎಂದು ಪತಂಜಲಿ ಆಡಳಿತಮೂಲ ತಿಳಿಸಿದೆ.
ಸಂಗ್ರಹಾಲಯದಲ್ಲಿರುವ ಹೆಸರಾಂತ ವ್ಯಕ್ತಿಗಳ ಪ್ರತಿಮೆಯ ಸಾಲಿಗೆ ರಾಮ್​ದೇವ್​ ಅವರು ಸೇರಿದ್ದು, ಈಗಾಗಲೇ ಸಂಗ್ರಹಾಲಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ, ಕ್ರೀಡೆ, ಸಿನಿಮಾ ಮುಂತಾದ ವಿಭಾಗಗಳಲ್ಲಿ ಹೆಸರು ಮಾಡಿದ ವ್ಯಕ್ತಿಗಳ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಆದರೆ, ಇದೇ ಮೊದಲ ಬಾರಿಗೆ ಯೋಗಿಯೊಬ್ಬರ ಮೇಣದ ಪ್ರತಿಮೆಯನ್ನು ನಿರ್ಮಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT