ದೇಶ

ತ್ರಿಪುರ ಮುಖ್ಯಮಂತ್ರಿ ಸ್ಥಾನಕ್ಕೆ ಮಾಣಿಕ್ ಸರ್ಕಾರ್ ರಾಜಿನಾಮೆ

Lingaraj Badiger
ಅಗರ್ತಾಲ: ತ್ರಿಪುರ ನಿರ್ಗಮಿತ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರು ಭಾನುವಾರ ತಮ್ಮ ಸ್ಥಾನಕ್ಕೆ ರಾಜಿ ನಾಮೆ ನೀಡಿದ್ದಾರೆ. 
ಸುಮಾರು 25 ವರ್ಷಗಳ ನಂತರ ಬಿಜೆಪಿ-ಐಪಿಎಫ್ ಟಿ ಮೈತ್ರಿಕೂಟದ ವಿರುದ್ಧ ಸಿಪಿಎಂ ನೇತೃತ್ವದ ಎಡಪಕ್ಷ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಮಾಣಿಕ್ ಸರ್ಕಾರ ಅವರು ಇಂದು ರಾಜ್ಯಪಾಲ ತಥಾಗತ್ ರಾಯ್ ಅವರಿಗೆ ರಾಜಿನಾಮೆ ಪತ್ರ ಸಲ್ಲಿಸಿದರು.
ಸರ್ಕಾರ್ ರಾಜಿನಾಮೆ ಅಂಗೀಕರಿಸಿದ ರಾಜ್ಯಪಾಲರು, ನೂತನ ಸರ್ಕಾರ ರಚನೆಯಾಗುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಸೂಚಿಸಿದ್ದಾರೆ.
ತ್ರಿಪುರ ವಿಧಾನಸಭೆ ಚುನಾವಣೆ ಫಲಿತಾಂಶ ನಿನ್ನೆ ಹೊರಬಿದ್ದಿದ್ದು, ಬಿಜೆಪಿ-ಐಪಿಎಫ್ ಟಿ ಸ್ಪಷ್ಟ ಬಹುಮತ ಪಡೆಯುವ ಮೂಲಕ 25 ವರ್ಷಗಳ ಸಿಪಿಎಂ ನೇತೃತ್ವದ ಎಡ ಪಕ್ಷದ ಸರ್ಕಾರವನ್ನು ಕಿತ್ತೊಗೆಯುವಲ್ಲಿಕೇಶರಿ ಪಡೆ ಯಶಸ್ವಿಯಾಗಿದೆ.
SCROLL FOR NEXT