ದೇಶ

ಹಣ ಬಲ, ಮಾಧ್ಯಮಗಳ ಅಪಪ್ರಚಾರ ಎಡಪಕ್ಷ ಸೋಲಿಗೆ ಕಾರಣ: ಮಾಣಿಕ್ ಸರ್ಕಾರ್

Lingaraj Badiger
ಅಗರ್ತಾಲ: ಊಹಿಸಲಾಗದಷ್ಟು ಹಣ ಬಲ ಮತ್ತು ಮಾಧ್ಯಮಗಳ ನಿರಂತರ ಅಪಪ್ರಚಾರವೇ ಸಿಪಿಐಎಂ ನೇತೃತ್ವದ ಎಡಪಕ್ಷ ಸೋಲಿಗೆ ಕಾರಣ ಎಂದು ತ್ರಿಪುರದ ನಿರ್ಗಮಿತ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರು ಸೋಮವಾರ ಆರೋಪಿಸಿದ್ದಾರೆ.
ವಿಧಾನಸಭೆ ಚುವಾವಣೆ ಫಲಿತಾಂಶ ಅನಿರೀಕ್ಷಿತ ಮತ್ತು ಎಡ ಪಕ್ಷ ಸರ್ಕಾರ ಕೆಳಗಿಳಿಸಲು ಬಿಜೆಪಿ ಯಾವ ರೀತಿ ಹಣ ಮತ್ತು ಕೇಂದ್ರದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಸರ್ಕಾರ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಎಂಜಿಎನ್ ಆರ್ ಇಜಿಎ ಮತ್ತು ವಸತಿ ಯೋಜನೆಗಳಿಗೆ ಹಣ ಹಂಚಿಕೆಯನ್ನು ಕಡಿಮೆ ಮಾಡುವ ಮೂಲಕ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ದಿಗ್ಬಂಧ ವಿಧಿಸಿತ್ತು ಎಂದು ಮಾಣಿಕ್ ಸರ್ಕಾರ್ ಆರೋಪಿಸಿದ್ದಾರೆ.
ಸಿಪಿಐ-ಎಂ ಲಭ್ಯವಿರುವ ಎಲ್ಲಾ ಮಾಹಿತಿಯನ್ನು ಪಡೆದು ಚುನಾವಣೆ ಸೋಲಿಗೆ ಕಾರಣ ಏನು ಎಂಬುದರ ಬಗ್ಗೆ ಅವಲೋಕನ ಮಾಡಲಾಗುವುದು ಎಂದು ಬಡ ನಿರ್ಗಮಿತ ಮುಖ್ಯಮಂತ್ರಿ ಹೇಳಿದ್ದಾರೆ.
SCROLL FOR NEXT