ನವದೆಹಲಿ: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನಿಡಬೇಕೆನ್ನುವ ಬೇಡಿಕೆ ಇಟ್ಟು ತೆಲುಗುದೇಶಂ ಸಂಸದರು ಸದನದ ಬಾವಿಗಿಳಿದು ಗದ್ದಲ ಎಬ್ಬಿಸಿದ್ದಾರೆ. ಸಂಸತ್ ಕಲಾಪ ಪ್ರಾರಂಬವಾಗಿ 12 ದಿನಗಳಿಂಡಲೂ ಗಲಾಟೆ, ಪ್ರತಿಭಟನೆಗಳಿಂದ ಸಮಯ ವ್ಯರ್ಥವಾಗುತ್ತಿದ್ದು ಇಂದೂ ಸಹ ಇದೇ ರೀತಿಯ ಗದ್ದಲದ ಕಾರಣ ಉಭಯ ಸದನಗಳ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
ಈ ನಡುವೆ ಇರಾಕ್ ನಲ್ಲಿ ಇಸೀಸ್ ನಿಂದ ಭಾರತೀಯರು ಹತ್ಯೆಯಾದ ಕುರಿತಂತೆ ಸದನದಲ್ಲಿ ಚರ್ಚೆ ನಡೆಯಬೇಕೆಂದು ಕಾಂಗ್ರೆಸ್ ಪಕ್ಷ ಪಟ್ಟು ಹಿಡಿದಿತ್ತು.
"ಸದನದಲ್ಲಿ ಸುಗಮ ಕಲಾಪ ನಡೆಯುವಂತೆ ನೊಡಿಕೊಳ್ಳುವುದು ಸರ್ಕಾರದ ಕರ್ತವ್ಯವೂ ಆಗಿದೆ ಎಂದು ವಿಪಕ್ಷ ನಾಯಕರು ಹೇಳಿದ್ದಾರೆ.
ಹೀಗಾದರೂ ಗದ್ದಲ ಹೆಚ್ಚಾಗಿರುವ ಕಾರಣ ಉಭಯ ಸದನಗಳನ್ನು ನಾಳೆಗೆ ಮುಂದೂಡಿ ಆಯಾ ಸದನದ ಸಬಾಧ್ಯಕ್ಷರು ಆದೇಶಿಸಿದರು.