ಸಾಂದರ್ಭಿಕ ಚಿತ್ರ 
ದೇಶ

ರೈಲ್ವೆಯ ರಿವರ್ಸ್ ಹರಾಜಿನಿಂದ ವಾರ್ಷಿಕವಾಗಿ 20,000 ಕೋಟಿ ರೂ ಉಳಿತಾಯ

ಭಾರತೀಯ ರೈಲ್ವೆಗೆ ನಿಗದಿತ ಉಳಿತಾಯದ ಬೆಳವಣಿಗೆಗೆ ಹೆಚ್ಚಿನ ಮೌಲ್ಯ ಸಂಗ್ರಹಣೆಗೆ ವೆಚ್ಚದಲ್ಲಿ ...

ನವದೆಹಲಿ: ಭಾರತೀಯ ರೈಲ್ವೆಗೆ ನಿಗದಿತ ಉಳಿತಾಯದ ಬೆಳವಣಿಗೆಗೆ ಹೆಚ್ಚಿನ ಮೌಲ್ಯ ಸಂಗ್ರಹಣೆಗೆ ವೆಚ್ಚದಲ್ಲಿ ಶೇಕಡಾ 10ರಷ್ಟು ಉಳಿತಾಯ ಮತ್ತು ಸಂಗ್ರಹಣೆಯಲ್ಲಿ ಒಟ್ಟು 20,000 ಕೋಟಿ ರೂಪಾಯಿಗಳಷ್ಟು ಉಳಿತಾಯಕ್ಕೆ ಎಲೆಕ್ಟ್ರಾನಿಕ್ ರಿವರ್ಸ್ ಆಕ್ಷನ್(ಇಆರ್ ಎ) ಪ್ರಕ್ರಿಯೆಯನ್ನು ಜಾರಿಗೆ ತರಲಾಗುವುದು ಎಂದು ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಇಲಾಖೆಯಲ್ಲಿ ಪಾರದರ್ಶಕತೆ ತರಲು, ಸುಗಮ ವ್ಯವಹಾರ ಮತ್ತು ಒಕ್ಕೂಟಗಳಿಂದ ಏಕಸ್ವಾಮ್ಯವನ್ನು ತಡೆಗಟ್ಟಲು ಈ ಹೊಸ ಉಪಕ್ರಮ ರೈಲ್ವೆ ವಲಯದಲ್ಲಿ ನಿಗದಿತ ಉಳಿತಾಯಕ್ಕೆ ಸಹಕಾರಿಯಾಗಲಿದೆ. ಇಂದು ಭಾರತೀಯ ರೈಲ್ವೆಯಲ್ಲಿ ಒಟ್ಟು ವಾರ್ಷಿಕ ವೆಚ್ಚ ಸುಮಾರು 1,50,000 ಕೋಟಿ ರೂಪಾಯಿ ತಗಲುತ್ತದೆ.

ಇದಕ್ಕೆ ಹೆಚ್ಚುವರಿಯಾಗಿ ಭಾರತೀಯ ರೈಲ್ವೆ, ಸಂಗ್ರಹಣೆ, ಪ್ರಯಾಣಿಕರು ಮತ್ತು ವಸ್ತುಗಳು, ಸೇವೆಗಳು ಮತ್ತು ಇತರ ಸುರಕ್ಷತಾ ಸಂಬಂಧಿ ಕೆಲಸಗಳ ಉತ್ಪಾದನೆ ಮತ್ತು ನಿರ್ವಹಣೆಗೆ ವಾರ್ಷಿಕವಾಗಿ ಭಾರತೀಯ ರೈಲ್ವೆ ಹೆಚ್ಚುವರಿಯಾಗಿ ಸುಮಾರು 50,000 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಸಂಗ್ರಹಿಸುತ್ತದೆ.

ವಿದ್ಯುನ್ಮಾನ ವಿರುದ್ಧ ಹರಾಜು ಪ್ರಕ್ರಿಯೆಯಿಂದ ವಸ್ತುಗಳು ಮತ್ತು ಸೇವೆಗಳ ಪೂರೈಕೆ ಸೇರಿದಂತೆ ಅಧಿಕ ಮೌಲ್ಯದ ವಸ್ತುಗಳ ಸಂಗ್ರಹ, ಯೋಜನೆಗಳು ಮತ್ತು ಕೆಲಸಗಳು ಪಾರದರ್ಶಕವಾಗಿ ನಡೆಯುವ ಸಾಧ್ಯತೆಯಿದ್ದು ಸ್ಪರ್ಧಾತ್ಮಕ ಬೆಲೆಯಲ್ಲಿ ಹರಾಜಾಗುವ ನಿರೀಕ್ಷೆಯಿದೆ. ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ವಸ್ತುಗಳು, ಸೇವೆಗಳು ಮತ್ತು ಕೆಲಸಗಳ ಪೂರೈಕೆಯಲ್ಲಿ ಕೂಡ ಕೈಗಾರಿಕೆಗಳು ನಿರತವಾಗಿರುತ್ತದೆ.

ಉದ್ಯಮಗಳ ಸುಗಮಗೊಳಿಸುವಿಕೆಯ ಮತ್ತೊಂದು ಲಾಭವೆಂದರೆ ಮಾನವನ ಮಧ್ಯಪ್ರವೇಶವನ್ನು ಇದು ಹೋಗಲಾಡಿಸಿ ಕಾಗದರಹಿತ ವಹಿವಾಟಿಗೆ ಪ್ರೋತ್ಸಾಹ ನೀಡುತ್ತದೆ. ರೈಲ್ವೆಗಳಿಗೆ ವಸ್ತುಗಳು ಮತ್ತು ಸೇವೆಗಳನ್ನು ಸ್ಪರ್ಧಾತ್ಮಕ ದರಗಳಲ್ಲಿ ಒದಗಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT