ಆರ್ನಾಬ್ ಗೋಸ್ವಾಮಿ 
ದೇಶ

ಆತ್ಮಹತ್ಯೆಗೆ ಪ್ರಚೋದನೆ, ರಿಪಬ್ಲಿಕ್ ಟಿವಿ ಆರ್ನಬ್‌ ಗೋಸ್ವಾಮಿ ವಿರುದ್ಧ ಎಫ್ಐಆರ್

ಒಳಾಂಗಣ ಅಲಂಕಾರ ಕಲಾವಿದರೊಬ್ಬರಿಗೆ ಆತ್ಮಹತ್ಯೆಗೆ ಪ್ರೇರಣೆ ನಿಡಿದ್ದರೆನ್ನುವ ಆರೋಪದ ಮೇಲೆ ರಿಪಬ್ಲಿಕ್‌ ಟಿವಿ ಚಾನೆಲ್‌ನ ಪ್ರಧಾನ ಸಂಪಾದಕ....

ರಾಯಗಢ(ಮಹಾರಾಷ್ಟ್ರ): ಒಳಾಂಗಣ ಅಲಂಕಾರ ಕಲಾವಿದರೊಬ್ಬರಿಗೆ ಆತ್ಮಹತ್ಯೆಗೆ ಪ್ರೇರಣೆ ನಿಡಿದ್ದರೆನ್ನುವ ಆರೋಪದ ಮೇಲೆ ರಿಪಬ್ಲಿಕ್‌ ಟಿವಿ ಚಾನೆಲ್‌ನ ಪ್ರಧಾನ ಸಂಪಾದಕ ಹಾಗೂ ಆಡಳಿತ ನಿರ್ದೇಶಕ ಆರ್ನಬ್ ಗೋಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಹಾರಾಷ್ಟ್ರದ ರಾಯಗಢದಲ್ಲಿನ ಆಲಿಬಾಗ್‌ನ ಬಂಗಲೆಯಲ್ಲಿ ಶನಿವಾರ ಬೆಳಿಗ್ಗೆ ಒಳಾಂಗಣ ಅಲಂಕಾರ ಕಲಾವಿದರೊಬ್ಬ ಆತ್ಮಹತ್ಯೆಗೆ ಶರಣಗಿದ್ದರು. ಆಕೆಯ ಪತ್ನಿ ನಿಡಿದ್ದ ದೂರಿನ ಆಧಾರದಲ್ಲಿ ರಾಯಗಢ ಪೋಲೀಸರು ಆರ್ನಬ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಳಾಂಗಣ ಅಲಂಕಾರ ಕಲಾವಿದ ಅನ್ವಯ್‌ ನಾಯ್ಕ್‌ ಆತ್ಮಹತ್ಯೆಗೆ ಮುನ್ನ ಬರೆದ ಡೆತ್ ನೊಟ್ ನಲ್ಲಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ  ಆರ್ನಬ್‌ ಗೋಸ್ವಾಮಿ, ಲೊಕಾಸ್ಟ್‌ಎಕ್ಸ್‌ನ ಫಿರೋಜ್‌ ಶೇಖ್‌ ಹಾಗು ಸ್ಮಾರ್ಟ್‌ ವರ್ಕ್ಸ್‌ನ ನಿತೇಶ್‌ ಸರ್ದಾ ಅವರ ಹೆಸರಿದೆ. "ನಾನುರಿಪಬ್ಲಿಕ್ ಟಿವಿ ಕಛೇರಿಯ ಒಳಾಂಗಣ ವಿನ್ಯಾಸ ನೆರವೇರಿಸಿದ್ದು ಅದಕ್ಕೆ ಇದುವರೆಗೆ ಹಣ ಪಾವತಿ ಆಗಿಲ್ಲ" ಎಂದು ಡೆತ್ ನೊಟ್ ನಲ್ಲಿ ಅವರು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಯಿಸಿರುವ ರಿಪಬ್ಲಿಕ್ ಟಿವಿ ತನ್ನ ಮೇಲಿನ ಆರೋಪಗಳನ್ನು ಅಲ್ಲಗಳೆದಿದೆ. ಇಂಟೀರಿಯಲ್ ಡೆಕಾರೇಟರ್ ಗೆ ಗುತ್ತಿಗೆ ಆಧಾರದಲ್ಲಿ ಎಷ್ಟು ಹಣ ಪಾವತಿಸಬೇಕಾಗಿತ್ತೋ ಅಷ್ಟೂ ಹಣ ಪಾವತಿಯಾಗಿದೆ. ಸಂಸ್ಥೆ ಯಾವ ಬಾಕಿ ಉಳಿಸಿಕೊಂಡಿಲ್ಲ’ ಎಂದು ಸಂಸ್ಥೆ ಸ್ಪಷ್ಟನೆ ಕೊಟ್ಟಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT