ಸಂಗ್ರಹ ಚಿತ್ರ 
ದೇಶ

ಭಾರತೀಯ ಸೇನೆ ನನ್ನನ್ನು ಕೊಂದು ಬಿಡಬಹುದಿತ್ತು ಆದರೆ, ನನಗೆ ಜೀವದಾನ ನೀಡಿತು; ಎಲ್ಇಟಿ ಉಗ್ರ

ಏ.30ರಂದು ಬಾರಾಮುಲ್ಲಾದಲ್ಲಿ ಸೇನಾಪಡೆಗಳಿಂದ ಬಂಧನಕ್ಕೊಳಗಾದ ಲಷ್ಕರ್-ಇ-ತೊಯ್ಬಾ ಉಗ್ರ ಐಜಾಜ್ ಗುಜ್ರಿಗೆ ಇದೀಗ ತನ್ನ ಪಾಪ ಪ್ರಜ್ಞೆ ಕಾಡತೊಡಗಿದ್ದು, ತಪ್ಪೊಪ್ಪಿಕೊಂಡಿದ್ದಾರೆ...

ಶ್ರೀನಗರ: ಏ.30ರಂದು ಬಾರಾಮುಲ್ಲಾದಲ್ಲಿ ಸೇನಾಪಡೆಗಳಿಂದ ಬಂಧನಕ್ಕೊಳಗಾದ ಲಷ್ಕರ್-ಇ-ತೊಯ್ಬಾ ಉಗ್ರ ಐಜಾಜ್ ಗುಜ್ರಿಗೆ ಇದೀಗ ತನ್ನ ಪಾಪ ಪ್ರಜ್ಞೆ ಕಾಡತೊಡಗಿದ್ದು, ತಪ್ಪೊಪ್ಪಿಕೊಂಡಿದ್ದಾನೆ. 
ಉಗ್ರ ಗುಜ್ರಿ ನೀಡಿರುವ ತಪ್ಪೊಪ್ಪಿಗೆಯ ಹೇಳಿಕೆ ವಿಡಿಯೋವನ್ನು ಸೈನಿಕರ ಸಮಕ್ಷಮದಲ್ಲಿ ಚಿತ್ರೀಕರಿಸಲಾಗಿದ್ದು, ವಿಡಿಯೋದಲ್ಲಿ ಉಗ್ರನಿಗೆ ಪಾಪ ಪ್ರಜ್ಞೆ ಕಾಡಿರುವುದು ಬಹಿರಂಗಗೊಂಡಿದೆ. 
ಬಂಧನಕ್ಕೊಳಪಡಿಸುವ ಸಂದರ್ಭದಲ್ಲಿ ಭಾರತೀಯ ಸೇನಾಪಡೆಗಳು ನನ್ನನ್ನು ಹತ್ಯೆ ಮಾಡಬಿಡಬಹುದಿತ್ತು. ಆದರೆ, ಅವರು ನನಗೆ ಜೀವನ ದಾನ ನೀಡಿದರು ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ, ತಪ್ಪು ದಾರಿಗೆ ಹೋಗುತ್ತಿರುವ ಯುವಕರು ತಮ್ಮ ಮನೆಗಳಿಗೆ ಮರಳಿ ಬರುವಂತೆ ಮನವಿ ಮಾಡಿಕೊಂಡಿದ್ದಾನೆ. 
ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿರುವವರು ಕಾಡಿನಲ್ಲಿ ಜೀವಿಸುತ್ತಿದ್ದಾರೆ. ಅವರಿಗೆ ಈ ಮೂಲಕ ಮನವಿ ಮಾಡಿಕೊಳ್ಳಲು ಇಚ್ಛಿಸುತ್ತೇನೆ. ಯಾರೆಲ್ಲಾ ತಪ್ಪು ದಾರಿಗೆ ಹೋಗುತ್ತಿದ್ದೀರೋ ಕೂಡಲೇ ನಿಮ್ಮ ಪೋಷಕರ ಬಳಿಗೆ ಬಂದು ಬಿಡಿ ಎಂದು ಹೇಳಿದ್ದಾನೆ. 
ಮತ್ತೊರ್ವ ಉಗ್ರ ನೀಸೀರ್ ಅಮಿನ್ ಎಂಬಾತನನ್ನು ಉದ್ದೇಶಿಸಿ ಮಾತನಾಡಿತ್ತಾ, ನಾಸೀರ್ ನಿನ್ನ ತಾಯಿ ತೀವ್ರ ಅನಾರೋಗ್ಯಕ್ಕೀಡಾಗಿದ್ದು, ಮನೆಗೆ ಮರಳಿ ಅವರ ಆರೈಕೆ ಮಾಡು ಎಂದು ಕೇಳಿಕೊಂಡಿದ್ದಾನೆ. 
ಸೇನಾಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಡಗಿ ಕುಳಿತಿದ್ದ ನಾವು ಯೋಧರತ್ತ ಗುಂಡು ಹಾರಿಸಿದ್ದೆವು. ಆದರೆ, ಅವರು ಪ್ರತಿ ದಾಳಿ ನಡೆಸಲಿಲ್ಲ. ನನ್ನ ಮೇಲೆ ಗುಂಡು ಹಾರಿಸಿ ಕೊಂದು ಬಿಡಬಹುದಿತ್ತು. ಆದರೆ, ಅವರು ನನ್ನನ್ನು ಬಂಧನಕ್ಕೊಳಪಡಿಸಿ ಜೀವದಾನ ಮಾಡಿದರು ಎಂದು ಹೇಳಿಕೊಂಡಿದ್ದಾನೆ.  
ಇದೇ ವೇಳೆ ಪಾಕಿಸ್ತಾನದ ವಿರುದ್ಧ ಕಿಡಿಕಾರಿರುವ ಆತ, ಕಾಶ್ಮೀರದಲ್ಲಿ ಶಾಂತಿ ನಾಶಗೊಳ್ಳಲು ಪಾಕಿಸ್ತಾನವೇ ಕಾರಣ. ಉಗ್ರ ಸಂಘಟನೆಗೆ ಸೇರ್ಪಡೆಗೊಂಡ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಶಾಂತಿ ನಾಶಪಡಿಸುವಂತೆ ಸೂಚಿಸಲಾಗಿತ್ತು. ಕಾಶ್ಮೀರದಲ್ಲಿ ಸೇನೆ ದೌರ್ಜನ್ಯ ನಡೆಸುತ್ತಿದ್ದು, ಇದು ಸರಿಯಲ್ಲ ಎಂದು ಹೇಳಿದ್ದರು. ಇದೀಗ ಅದೆಲ್ಲಾ ತಪ್ಪು ಎಂಬುದು ತಿಳಿಯುತ್ತಿದೆ. ಪಾಕಿಸ್ತಾನ ಪಿತೂರಿ ನಡೆಸುತ್ತಿದೆ ಎಂದಿದ್ದಾನೆ.  
ಕೆಲ ದಿನಗಳ ಹಿಂದಷ್ಟೇ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಸೇನಾಪಡೆ 4 ಉಗ್ರರನ್ನು ಬಂಧನಕ್ಕೊಳಪಡಿಸಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT