ಪಶ್ಚಿಮ ಬಂಗಾಳ: ಪ್ರಧಾನಿ, ಮುಖ್ಯಮಂತ್ರಿ ಹೆಸರು ಹೇಳಲು ಬಾರದ ಕೂಲಿ ಕಾರ್ಮಿಕನಿಗೆ ಥಳಿತ 
ದೇಶ

ಪಶ್ಚಿಮ ಬಂಗಾಳ: ಪ್ರಧಾನಿ, ಮುಖ್ಯಮಂತ್ರಿ ಹೆಸರು ಹೇಳಲು ಬಾರದ ಕೂಲಿ ಕಾರ್ಮಿಕನಿಗೆ ಥಳಿತ

ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೆಸರನ್ನು ಹೇಳಲು ಬರದಿದ್ದ ಕಾರಣ ಅಮಾಯಕ.....

ಮಾಲ್ದಾ (ಪಶ್ಚಿಮ ಬಂಗಾಳ): ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೆಸರನ್ನು ಹೇಳಲು ಬರದಿದ್ದ ಕಾರಣ ಅಮಾಯಕ ಕೂಲಿ ಕೆಲಸಗಾರನೊಬ್ಬನಿಗೆ ಅಮಾನುಷವಾಗಿ ಥಳಿಸಿದ್ದ ಘಟನೆ  ಹೌರಾ- ಮಾಲ್ಡಾ ಫಾಸ್ಟ್ ಪ್ಯಾಸೆಂಜರ್ ರೈಲಿನಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮಾಲ್ಡಾದ ಕಾಲಿಯಾಚಾಕ್ ನಿವಾಸಿಯಾದ ಕೂಲಿ ಕೆಲಸಗಾರ ಜಮಾಲ್ ಮೊಮಿನ್ ಹಲ್ಲೆಗೊಳಗಾದ ವ್ಯಕ್ತಿ. ಮೇ 14ರಂದು ಈ ಘಟನೆ ನಡೆದಿದ್ದು ತನ್ನೂರಿಗೆ ತೆರಳುತ್ತಿದ್ದ ಜಮಾಲ್ ಮೇಲೆ ಹಲ್ಲೆ ನಡೆಸಲಾಗಿದೆ.
ರೈಲು ಹೌರಾ ಮತ್ತು ಬಂದೇಲ್ ನಡುವೆ ಸಾಗುತ್ತಿದ್ದಾಗ ರೈಲನ್ನೇರಿದ ನಾಲ್ವರು ಯುವಕರು ಜಮಾಲ್ ಕುಳಿತಿದ್ದ ಸೀಟಿನಿಂದ ಆತನನ್ನು ಎಬ್ಬಿಸಲು ಯೋಜಿಸಿದ್ದಾರೆ. ಇದಕ್ಕೆ ಅವರು ಆತನಿಗೆ ದೇಶದ ಪ್ರಧಾನಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಯಾರೆಂದು ಕೇಳಿದ್ದಾರೆ. ಕೂಲಿ ಕೆಲಸಗಾರನಾದ ನಾನು ಹೆಚ್ಚು ಓದಿಲ್ಲ, ನನಗೆ ಇದರ ಅರಿವಿಲ್ಲ ಎಂದ ಜಮಾಲ್ ಉತ್ತರದಿಂದ ತೃಪ್ತರಾಗದ ಅವರು ನವಾಜ್ ಷರೀಫ್ ಯಾರೆಂದು ಕೇಳಿದ್ದಾರೆ. ಆದರೆ ಅದಕ್ಕೆ ಸಹ ಆತ ಉತ್ತರಿಸದೆ ಹೋದಾಗ ನೀನು ದಿನ ನಿತ್ಯ ನಮಾಜ್ ಮಾಡುತ್ತೀಯ, ಮಸೀದೆಗೆ ತೆರಳಿ ನಮಾಜ್ ಮಾಡುವ ನಿನಗೆ ನಮ್ಮ ಪ್ರಧಾನಿ ಯಾರು? ರಾಷ್ಟ್ರಗೀತೆ ಯಾವುದೆಂದು ತಿಳಿದಿಲ್ಲ ಎನ್ನುತ್ತಾ ಅವನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.
ಕೂಲಿ ಕೆಲಸಗಾರ ಜಮಾಲ್ ಎಷ್ಟೇ ಗೋಳಾಡಿದರ್ಯು ಬಿಡದೆ ಅವನನ್ನು ಥಳಿಸಿದ್ದಾರೆ. ರೈಲಿನಲ್ಲಿದ್ದ ಬೇರೆ ಯಾವ ಪ್ರಯಾಣಿಕರೂ ಸಹ ಇವನ ನೆರವಿಗೆ ಧಾವಿಸಿರಲಿಲ್ಲ.  ಕಡೆಗೆ ಬಂದೇಲ್ ನಿಲ್ದಾಣದಲ್ಲಿ ಆತನಿಗೆ "ಭಾರತ್ ಮಾತಾ ಕಿ ಜೈ" ಎಂದು ಹೇಳಿ ಇಳಿಯುವಂತೆ ಹಲ್ಲೆಕೋರರ ದಂಡು ಸೂಚಿಸಿದೆ. 
ಜಮಾಲ್ ಗೆ ಹಲ್ಲೆ ನಡೆಸಿದ ವೀಡಿಯೋ ದೃಶ್ಯ ವೈರಲ್ ಆಗಿದ್ದು ಸ್ವಯಂ ಸೇವಾ ಸಂಥೆಯೊಂದು ಈ ಸಂಬಂಧ ಪೋಲೀಸರಿಗೆ ದೂರು ಸಲ್ಲಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT