ಬಾವಲಿ ಹಾಗೂ ಜಾನುವಾರುಗಳಿಂದ ನಿಫಾ ಹರಡಲ್ಲ: ಕೇರಳ ಪಶುಸಂಗೋಪನೆ ಇಲಾಖೆ 
ದೇಶ

ಬಾವಲಿ ಹಾಗೂ ಜಾನುವಾರುಗಳಿಂದ ನಿಫಾ ಹರಡಲ್ಲ: ಕೇರಳ ಪಶುಸಂಗೋಪನೆ ಇಲಾಖೆ

ಕೇರಳದ ಪೆರಾಂಬ್ರಾದಲ್ಲಿ ಬಾವಲಿಗಳು ಹಾಗೂ ಇತರೆ ಜಾನುವಾರುಗಳಿಂದ ಸಂಗ್ರಹಿಸಲಾದ 21 ದೈಹಿಕ ದ್ರವ, ರಕ್ತ ಮಾದರಿಗಳಲ್ಲಿ ಪ್ರಾಣಾಂತಿಕ ನಿಫಾ ವೈರಾಣು.......

ಕೋಝಿಕೋಡ್(ಕೇರಳ): ಕೇರಳದ ಪೆರಾಂಬ್ರಾದಲ್ಲಿ ಬಾವಲಿಗಳು ಹಾಗೂ ಇತರೆ ಜಾನುವಾರುಗಳಿಂದ ಸಂಗ್ರಹಿಸಲಾದ 21 ದೈಹಿಕ ದ್ರವ, ರಕ್ತ ಮಾದರಿಗಳಲ್ಲಿ ಪ್ರಾಣಾಂತಿಕ ನಿಫಾ ವೈರಾಣು ಕುರುಹುಗಳು ಪತ್ತೆಯಾಗಿಲ್ಲ ಎಂದು ಭೋಪಾಲ್ ನ .ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಡಿಸೀಸಸ್ ನಡೆಸಿದ ಪರೀಕ್ಷೆಗಳಲ್ಲಿ ತಿಳಿದುಬಂದಿದೆ. 
ಎನ್ ಐಎಚ್ ಎಸ್ ಡಿ, ಭೋಪಾಲ್ ನ ವರದಿ ಶುಕ್ರವಾರ ಸಂಜೆ ವೇಳೆಗೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳ ಕೈಸೇರಿದೆ. ಪಶುಸಂಗೋಪನಾ ಇಲಾಖೆ ನಿರ್ದೇಶಕ ಡಾ. ಎನ್.ಎನ್. ಸಸಿ ಎಕ್ಸ್ ಪ್ರೆಸ್ ಜತೆ ಮಾತನಾಡಿ  " ಮೂರು ಬಾವಲಿಗಳು, ನಾಲ್ಕು ಆಡುಗಳು, ಐದು ಕಾಡುಕೋಣ, ಮತ್ತು ಎಂಟು ಹಂದಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಮತ್ತು ಎಲ್ಲಾ   ಋಣಾತ್ಮಕ ಫಲಿತಾಂಶ ಬಂದಿದೆ. ಬಾವಲಿಗಳ ದೇಹದ ದ್ರವ, ರಕ್ತದ ಮಾದರಿಯಲ್ಲಿ ಸಹ ವೈರಾಣು ಇರುವುದು ಪತ್ತೆಯಾಗಿಲ್ಲ " ಎಂದರು.
ಈ ವೈರಸ್ ಹರಡಲು ಕಾರಣವಾಗಿರುವುದು ಮೈಕ್ರೊಬ್ಯಾಟ್ (ಬಾವಲಿ ಕೀಟ) ಹೊರತು ಸಾಮಾನ್ಯ ಬಾವಲಿಯಲ್ಲ.ಎಂದು ಅವರು ದೃಢಪಡಿಸಿದ್ದಾರೆ
"ಶನಿವಾರ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ, ರಾಜ್ಯ ಅರಣ್ಯ ಇಲಾಖೆ ಹಾಗು ಪಶುಸಂಗೋಪನಾ ಇಲಾಖೆಗಳು ಜಂಟಿಯಾಗಿ ಬಾವಲಿಗಳು ಹಾಗೂ ಮತ್ತಿತರೆ ಪ್ರಾಣಿಗಳ ದೇಹದ ಮಾದರಿಗಳನ್ನು ಹೆಚ್ಚುವರಿ ಪರೀಕ್ಷೆಗಾಗಿ ಸಂಗ್ರಹಿಸಲಿದ್ದೇವೆ" ಸಸಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT