ಪ್ರಧಾನಿ ನರೇಂದ್ರ ಮೋದಿ 
ದೇಶ

ಮನ್ ಕೀ ಬಾತ್ : ಐಎನ್ ವಿಎಸ್ ತರುಣ ಮಹಿಳಾ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

254 ದಿನಗಳಲ್ಲಿ 22 ಸಾವಿರ ಮೈಲು ದೂರು ಕ್ರಮಿಸಿ ಇಡೀ ಜಗತ್ತನೇ ಸುತ್ತಿದ್ದ ಭಾರತೀಯ ನೌಕಯಾನ -ಐಎನ್ ಎಸ್ ವಿಯ ಆರು ಮಂದಿ ತರುಣ ಮಹಿಳಾ ತಂಡವನ್ನು ಪ್ರಧಾನಿ ನರೇಂದ್ರಮೋದಿ ಅಭಿನಂದಿಸಿದ್ದಾರೆ.

ನವದೆಹಲಿ: 254 ದಿನಗಳಲ್ಲಿ 22 ಸಾವಿರ ಮೈಲು ದೂರು ಕ್ರಮಿಸಿ ಇಡೀ ಜಗತ್ತನೇ ಸುತ್ತಿದ್ದ ಭಾರತೀಯ ನೌಕಯಾನ -ಐಎನ್ ಎಸ್ ವಿಯ ಆರು ಮಂದಿ ತರುಣ ಮಹಿಳಾ ತಂಡವನ್ನು ಪ್ರಧಾನಿ ನರೇಂದ್ರಮೋದಿ ಅಭಿನಂದಿಸಿದ್ದಾರೆ.

ಆಕಾಶವಾಣಿಯ ಮನ್ ಕೀ ಬಾತ್ ಕಾರ್ಯಕ್ರಮದ 44 ನೇ ಆವೃತ್ತಿಯಲ್ಲಿಂದು ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ಮಕ್ಕಳಾದ ಈ ಆರು ಮಂದಿ 254 ದಿನಗಳಲ್ಲಿ ಇಡೀ ವಿಶ್ವ ಸುತ್ತುವ ಮೂಲಕ ನೌಕ ಕ್ಷೇತ್ರದಲ್ಲಿ ಪರಾಕ್ರಮ ಮೆರೆದಿದ್ದಾರೆ ಎಂದು ಪ್ರಶಂಸಿದ್ದಾರೆ.

ಜಗತ್ತಿನ ಪ್ರಮುಖ ಸಾಗರ ಸಮುದ್ರಗಳಲ್ಲಿ ಹಡುಗು ಮೂಲಕವೇ 22 ಸಾವಿರ ಮೈಲಿ ಕ್ರಮಿಸಿರುವುದು ಒಂದು ರೀತಿಯ ಸಾಧನೆಯಾಗಿದ್ದು, ಮೇ 21 ರಂದು ಭಾರತಕ್ಕೆ ವಾಪಾಸ್ಸಾದ ಅವರನ್ನು  ಅದ್ದೂರಿಯಾಗಿ ಸ್ವಾಗತಿಸಲಾಗಿತ್ತು.  

ಆಸ್ಟ್ರೇಲಿಯಾದ ಪ್ರಿಮ್ಯಾಂಟಲ್,  ನ್ಯೂಜಿಲ್ಯಾಂಡ್ ನ ಲೈಟೆಲ್ಟನ್,  ಪೊಲ್ಕ್ ಲ್ಯಾಂಡ್ಸ್ ನ  ಸ್ಟ್ಯಾನ್ಲಿ,  ದಕ್ಷಿಣ ಆಫ್ರಿಕಾದ  ಕೇಪ್ ಟೌನ್ ಬಂದರುಗಳಲ್ಲಿ ನಿಲುಗಡೆಯೊಂದಿಗೆ 8 ತಿಂಗಳ ಕಾಲ ಯಶಸ್ವಿಯಾಗಿ ಜಗತ್ತು ಸುತ್ತಿ ಮೇ 21 ರಂದು ಗೋವಾದ ಪಣಜಿಗೆ  ಈ ತಂಡ ಆಗಮಿಸಿತ್ತು.
ನೌಕಾ ಪಡೆ ಆಡ್ಮೀರಲ್ ಸುನೀಲ್ ಲಾಂಬಾ ಅವರೊಂದಿಗೆ ಎಲ್ಲಾ ಮಹಿಳಾ ಸಿಬ್ಬಂದಿಯನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ತಂಡವನ್ನು ಬರಮಾಡಿಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

SCROLL FOR NEXT