ನವದೆಹಲಿ: ಕೆಲವು ಸಂಶೋಧಕರು ಇತಿಹಾಸವನ್ನು ಪುನಃ ಬರೆಯಲು ಯತ್ನಿಸುತ್ತಿದ್ದಾರೆ. ಆದರೆ ಅವರು ಯಶಸ್ವಿಯಾಗುವುದಿಲ್ಲ ಎಂದು ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಭಾನುವಾರ ಹೇಳಿದ್ದಾರೆ.
ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅನ್ಸಾರಿ, ದೀರ್ಘಕಾಲದ ಹಿಂದೆಯೇ, 'ಟೈಮ್ ಮಷಿನ್' ಎಂಬ ಶೀರ್ಷಿಕೆಯ ಪುಸ್ತಕ ಬರೆಯಲಾಗಿದೆ. ತಂತ್ರಜ್ಞಾನದ ಪರಿಕಲ್ಪನೆ ಮತ್ತು ಹಿಂದೆ ತಂತ್ರಜ್ಞಾನವನ್ನು ಹೇಗೆ ಬಳಸುತ್ತಿದ್ದರು ಎಂಬುದನ್ನು ತಿಳಿದುಕೊಳ್ಳಲು ಒಂದು ಅತ್ಯುತ್ತಮ ಪುಸ್ತಕವಾಗಿದೆ ಎಂದರು.
ಈಗ ಕೆಲ ಸಂಶೋಧರು. ಅವರು ಬರಹಗಾರರಲ್ಲ. ಇತಿಹಾಸವನ್ನು ಪುನಃ ಬರೆಯಲು ಯತ್ನಿಸುತ್ತಿದ್ದಾರೆ. ಆದರೆ ಅಂತಹ ಪ್ರಯತ್ನ ಫಲ ನೀಡುವುದಿಲ್ಲ ಎಂದು ಮಾಜಿ ಉಪ ರಾಷ್ಟ್ರಪತಿಗಳು ಹೇಳಿದ್ದಾರೆ.
ಇತಿಹಾಸ, ಇತಿಹಾಸವೇ. ಅದನ್ನು ಓದಬೇಕು ಮತ್ತು ಅದರಿಂದ ಪಾಠ ಕಲಿಯಬೇಕು ಅಥವಾ ಕಾಲೇಜ್ ಗಳಲ್ಲಿ ಪರೀಕ್ಷೆಗಾಗಿ ಓದಿಕೊಳ್ಳಬೇಕು. ಆದರೆ ಅದನ್ನು ಬದಲಿಸುವ ಯತ್ನ ಮಾಡಬಾರದು ಎಂದು ಅನ್ಸಾರಿ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos