ಪಿ ಚಿದಂಬರಂ 
ದೇಶ

ಏರ್ಸೆಲ್-ಮಾರ್ಕ್ಸಿಸ್ ಪ್ರಕರಣ: ಕೇಂದ್ರ ಮಾಜಿ ಸಚಿವ ಪಿ ಚಿದಂಬರಂಗೆ ಮಧ್ಯಂತರ ನಿರೀಕ್ಷಣಾ ಜಾಮೀನು

ಏರ್ ಸೆಲ್-ಮ್ಯಾಕ್ಸಿಸ್ ಗೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ(ಎಫ್ಐಪಿಬಿ)ಯ ಅನುಮತಿ ಒದಗಿಸುವ ಹಗರಣದ ಪಿತ್ತೂರಿಯಲ್ಲಿ ಕೇಂದ್ರ ಮಾಜಿ ಹಣಕಾಸು ಸಚಿವ...

ನವದೆಹಲಿ: ಏರ್ ಸೆಲ್-ಮ್ಯಾಕ್ಸಿಸ್ ಗೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ(ಎಫ್ಐಪಿಬಿ)ಯ ಅನುಮತಿ ಒದಗಿಸುವ ಹಗರಣದ ಪಿತ್ತೂರಿಯಲ್ಲಿ ಕೇಂದ್ರ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂಗೆ ಸಂಕಷ್ಟ ಎದುರಾಗಿದ್ದು ಈ ಸಂಬಂಧ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಚಿದಂಬಂರಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕೋರ್ಟ್ ಜೂನ್ 5ರವರೆಗೆ ಚಿದಂಬರಂಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಮುಂದಿನ ವಿಚಾರಣೆ ಜೂನ್ 5ಕ್ಕೆ ಮುಂದೂಡಿದ್ದು ಅಂದು ಕೋರ್ಟ್ ಮುಂದೆ ಚಿದಂಬರಂ ಅವರನ್ನು ಹಾಜರುಪಡಿಸುವಂತೆ ಜಾರಿ ನಿರ್ದೇಶನಾಲಯಗೆ ಕೋರ್ಟ್ ಸೂಚಿಸಿದೆ. 
ಏರ್ ಸೆಲ್ ಸಂಸ್ಥೆ 2006ರಲ್ಲಿ 3,500 ಕೋಟಿ ರುಪಾಯಿ ವಿದೇಶಿ ನೇರ ಹೂಡಿಕೆ(ಎಫ್​ಡಿಐ)ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ ಟೆಲಿಕಾಂ ಕಂಪನಿ ಕೇವಲ 180 ಕೋಟಿ ರುಪಾಯಿ ಎಫ್​ಡಿಐಗೆ ಅನುಮತಿ ಕೇಳಿದೆ ಎಂದು ನಮೂದಿಸುವ ಮೂಲಕ ಸಿಸಿಇಎಗೆ ಆ ಅರ್ಜಿ ರವಾನೆಯಾಗದಂತೆ ಹಣಕಾಸು ಸಚಿವಾಲಯ ನೋಡಿಕೊಂಡಿತ್ತು. 
ಅಂದಿನ ನಿಯಮಾನುಸಾರ 600 ಕೋಟಿ ರುಪಾಯಿ ತನಕದ ಎಫ್​ಡಿಐಗೆ ಹಣಕಾಸು ಸಚಿವಾಲಯ ಎಫ್ಐಪಿಬಿ ಮೂಲಕ ಅನುಮತಿಸುವುದಕ್ಕೆ ಅಧಿಕಾರವಿತ್ತು. ಮಾಜಿ ಹಣಕಾಸು ಸಚಿವ ಚಿದಂಬರಂ ಪುತ್ರ ಕಾರ್ತಿಗೆ ಏರ್ ಸೆಲ್ ಕಂಪನಿ 26 ಲಕ್ಷ ರುಪಾಯಿಯನ್ನು ಪಾವತಿಸಿತ್ತು. ಈ ಪ್ರಕರಣವೀಗ ಅಕ್ರಮ ಹಣ ವರ್ಗಾವಣೆ ಕಾಯ್ದೆ(ಪಿಎಂಎಲ್ಎ) ಪ್ರಕಾರ ತನಿಖೆ ನಡೆಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT