ಶ್ರೀ ಶ್ರೀ ರವಿಶಂಕರ್ 
ದೇಶ

ರಾಮ ಮಂದಿರ ನಿರ್ಮಾಣಕ್ಕಿರುವ ಎಲ್ಲಾ ಆಯ್ಕೆಗಳೂ ಮುಕ್ತವಾಗಿರಲಿ: ಶ್ರೀ ಶ್ರೀ ರವಿಶಂಕರ್

ರಾಮ ಮಂದಿರ ನಿರ್ಮಾಣಕ್ಕೆ ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಮುಕ್ತವಾಗಿಸಬೇಕು. ಸಂತರು ತಾವು ಈ ಕುರಿತು ಪ್ರಥಮ ಹೆಜ್ಜೆ ಇಟ್ಟು ಒತ್ತಡ ಹೆಚ್ಚಿಸಬೇಕು ಎಂದು ಆದ್ಯಾತ್ಮ ಗುರು, ಆರ್ಟ್ ಆಫ್ ಲಿವಿಂಗ್ ನ....

ನವದೆಹಲಿ: ರಾಮ ಮಂದಿರ ನಿರ್ಮಾಣಕ್ಕೆ ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಮುಕ್ತವಾಗಿಸಬೇಕು. ಸಂತರು ತಾವು ಈ ಕುರಿತು ಪ್ರಥಮ ಹೆಜ್ಜೆ ಇಟ್ಟು ಒತ್ತಡ ಹೆಚ್ಚಿಸಬೇಕು ಎಂದು ಆದ್ಯಾತ್ಮ ಗುರು, ಆರ್ಟ್ ಆಫ್ ಲಿವಿಂಗ್ ನ ಮುಖ್ಯಸ್ಥರಾದ ಶ್ರೀ ಶ್ರೀ ರವಿಶಂಕರ್ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಂತರ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ರವಿಶಂಕರ್ "ನಮಗೆ ಮೂರು ಮಾರ್ಗಗಳಿದೆ. ಒಂದು ಮಸ್ಯೆಯನ್ನು ಬಗೆಹರಿಸಲು ಮಾತುಕತೆಗಳನ್ನು ಮುಂದುವರಿಸಬೇಕು. ಎರಡನೆಯದಾಗಿ ಈ ವಿಷಯದಲ್ಲಿ ತುರ್ತು ತೀರ್ಮಾನ ನೀಡುವಂತೆ ನಾವು ಸುಪ್ರೀಂ ಕೋರ್ಟ್ ಅನ್ನು ಒತ್ತಾಯಿಸಬೇಕು. ಮೂರನೆಯದಾಗಿ ಸರ್ಕಾರ ರಾಮಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಬೇಕೆಂದು ನಾವು ಮನವಿ ಮಾಡಬೇಕು.
"ಇದು 500 ವರ್ಷಗಳ ಹಿಂದಿನ ವಿಷಯವಾಗಿದ್ದು ಜನರು ನಮ್ಮ ಮೇಲೆ ಭರವಸೆ ಹೊಂದಿದ್ದಾರೆ. ಅಯೋಧ್ಯೆಯಲ್ಲಿ ಸುಂದರವಾದ ರಾಮಮಂದಿರ ನಿರ್ಮಾಣಕ್ಕಾಗಿ ಭಾರತದ ಜನರು ಬಯಸುತ್ತಾರೆ. ನಾವು ಅದಕ್ಕಾಗಿ ಪ್ರಯತ್ನಿಸಬೇಕಿದೆ.ಭಾರತದ ಜನರ ಹಾರೈಕೆಯನ್ನು ಪೂರೈಸಲು ಪ್ರಾರ್ಥಿಸಬೇಕು" ಅವರು ಹೇಳಿದ್ದಾರೆ.
ಮಂದಿರ ನಿರ್ಮಾಣದಲ್ಲಿ ಸಂತ ಸಮುದಾಯದ ಪಾತ್ರವನ್ನು ಮತ್ತಷ್ಟು ಒತ್ತಿ ಹೇಳಿದ ಶ್ರೀ ಶ್ರೀ ರವಿಶಂಕರ್ "ದೇಶ ಯಾವುದೇ ಬಿಕ್ಕಟ್ಟಿನಲ್ಲಿದ್ದಾಗ ಸಂತರು ಸಮಾಜಕ್ಕೆ ಸಹಾಯ ಮಾಡಲು ಮುಂದಾಗುತ್ತಾರೆ. ಅವರು ಸಮಾಜದಲ್ಲಿ ಶಾಂತಿಯನ್ನು ಕಾಪಾಡಲು ಹಾಗೂ  ಅಗತ್ಯವಿದ್ದಾಗ ಸಮಾಜವನ್ನು ಎಚ್ಚರಿಸಲೂ ಇದ್ದಾರೆ.ನಾವು ಜನರನ್ನು ಶಾಂತಿಯ ಮಾರ್ಗದಲ್ಲಿ ನಡೆಯುವಂತೆ ಮಾಡುತ್ತೇವೆ ಹಾಗೆಯೇ ಅಗತ್ಯವಾದರೆ ಕ್ರಾಂತಿಗಾಗಿಯೂ ಕರೆ ನೀಡಲಿದ್ದೇವೆ" ಹೇಳಿದ್ದಾರೆ.
ಎರಡು ದಿನಗಳ ಕಾಲ ನಡೆಯುವ ಸಂತರ ಸಮಾವೇಶನವದೆಹಲಿಯ ಟಾಕಟೊರಾ ಕ್ರೀಡಾಂಗಣದಲ್ಲಿ  ಇಂದಿನಿಂದ ಪ್ರಾರಂಭವಾಗಿದೆ.ದೇಶದಾದ್ಯಂತದ ಅನೇಕ ಪ್ರಮುಖ ಸಂತರು ಸಭೆಗೆ  ಆಗಮಿಸಿದ್ದಾರೆ.ಸಮಾವೇಶದಲ್ಲಿ ಅಯೋಧ್ಯೆ ವಿವಾದದ ಕುರುತು ತಮ್ಮ ಅಭಿಪ್ರಾಯವನ್ನು ಅವರು ಹಂಚಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT