ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿತಿ ಮೀರುತ್ತಿರುವ ಮಾಲಿನ್ಯವನ್ನು ಖಂಡಿಸಿ ಜನರ ಗುಂಪೊಂದು ಪರಿಸರ ಸಚಿವಾಲಯದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ದೆಹಲಿ ವಾಯು ವಿಷವಾಗಿದೆ, ಉಸಿರಾಟವು ನನ್ನನ್ನು ಕೊಲ್ಲುತ್ತಿದೆ, # ಉಸಿರಾಟ ನನ್ನ ಹಕ್ಕು ಎಂಬ ಸಂದೇಶಗಳನ್ನು ಒಳಗೊಂಡ ಪೋಸ್ಟರ್ ಗಳನ್ನು ಹಿಡಿದು ಇಂದಿರಾ ಪರಿಯಾವರನ್ ಭವನದ ಮುಂದೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿ ಸುತ್ತಮುತ್ತಲಿನ ರಾಜ್ಯಗಳಲ್ಲಿ ಈ ಕೂಡಲೇ ತ್ಯಾಜ್ಯ ಸುಡುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕಳೆದ ಮೂರು ವಾರಗಳಿಂದ ದೆಹಲಿ ವಾಯು ಮಾಲಿನ್ಯ ಪ್ರಮಾಣ ಅಪಾಯದ ಮಟ್ಟ ತಲುಪಿದ್ದು, ಸೋಮವಾರ ಈ ವರ್ಷದಲ್ಲಿಯೇ ಅತಿ ಹೆಚ್ಚು ಮಾಲಿನ್ಯ ದಾಖಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos