ರಾಂಚಿ: ಬಯಲಿನಲ್ಲಿ ಮಲವಿಸರ್ಜನೆ ಮಾಡಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಉಸಿರುಗಟ್ಟಿಸಿ ಕೊಂಡದಿರುವ ಆಘಾತಕಾರಿ ಘಟನೆ ರಾಂಚಿಯ ಸುಕ್ರಾ ಬಜಾರ್ ನ ಪಲಮು ಜಿಲ್ಲೆಯಲ್ಲಿ ನಡೆದಿದೆ.
ತಮ್ಮ ಜಮೀನಿನಲ್ಲಿ 45 ವರ್ಷದ ವ್ಯಕ್ತಿಯೊಬ್ಬ ಮಲ ವಿಸರ್ಜನೆ ಮಾಡಿದ್ದನ್ನು ನೋಡಿದ ಆರೋಪಿಗಳು ಆತನನ್ನು ಕೊಲೆ ಮಾಡಿದ್ದಾರೆ ಎಂದು ತನಿಖೆ ನಡೆಸಿರುವ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ,
ಇದೇ ವಿಷಯವಾಗಿ ಈ ಹಿಂದೆಯೂ ಜಗಳ ನಡೆದಿತ್ತು ಎನ್ನಲಾಗಿದೆ. ಇಬ್ಬರು ಕುಟುಂಬಗಳು ಸಂಬಂಧಿಕರಾಗಿದ್ದು, ಜಮೀನು ವಿವಾದ ಸಂಬಂಧ ಮನಸ್ತಾಪ ಮೂಡಿತ್ತು. ಗುರುವಾರ ಮೃತ ವ್ಯಕ್ತಿ ಆರೋಪಿಗಳ ಜಮೀನಲ್ಲಿ ಶೌಚ ಮಾಡುತ್ತಿದ್ದನ್ನು ಕಂಡು ಆತನನ್ನು ಕೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಮಹೇಂದ್ರ ಮತ್ತು ಚೋಟುಕುಮಾರ್ ಎಂಬ ಇಬ್ಬರನ್ನು ಬಂಧಿಸಲಾಗಿದ್ದು, ಪ್ರಕರಣದ ಮತ್ತೊಬ್ಬ ಮಹಿಳಾ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ವ್ಯಕ್ತಿಯ ಪುತ್ರನ ಆಧಾರದ ಮೇಲೆ ಎಫ್ ಐ ಆರ್ ದಾಖಲಾಗಿದ್ದು, ಇಬ್ಬರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos