ದೇಶ

ಸಾಲಗಾರರ ಹಾವಳಿ: ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಮಹಿಳೆ ಆತ್ಮಹತ್ಯೆ

Shilpa D
ಮುಜಾಫರ್: ಸಾಲಗಾರರ ಕಾಟದಿಂದ ಬೇಸತ್ತ ಮಹಿಳೆಯೋರ್ವರು ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಝಾಫರ್ ನಗರದಲ್ಲಿ ನಡೆದಿದೆ.
45 ವರ್ಷದ ಮಹಿಳೆ ಮತ್ತಾಕೆಯ ಮಕ್ಕಳಿಗೆ ಸಾಲಗಾರರು ಕಾಟ ನೀಡುತ್ತಿದ್ದರು ಇದರಿಂದ ಬೇಸತ್ತ ಮಹಿಳೆ ಸಾವಿಗೆ ಶರಣಾಗಿದ್ದಾರೆ. ಈ ಸಂಬಂಧ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಪಡೆದ ಹಣವನ್ನು ವಾಪಸ್ ನೀಡಲಿಲ್ಲ ಎಂಬ ಕಾರಣಕ್ಕೆ ಅನಿಲ್ ತಿವಾರಿ ಮತ್ತು ರಾಮ್ ಕಿಶನ್ ಎಂಬುವರು ಮಹಿಳೆ ಮನೆಗೆ ನುಗ್ಗಿ ಆಕೆಯ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ.ಒಂದು ವೇಳೆ ಹಣ ನೀಡದಿದ್ದರೇ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿ ಹೋಗಿದ್ದರು.
ಇದರಿಂದ ಬೇಸತ್ತ ಮಹಿಳೆ ಶನಿವಾರ ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಆತ್ಮಹತ್ಯಗೆ ಶರಣಾಗಿದ್ದಾಳೆ, ಈ ಸಂಬಂಧ ರಾಮ್ ಕಿಶನ್ ಬಂಧಿಸಲಾಗಿದೆ.ಅನಿಲ್ ತಿವಾರಿಗಾಗಿ ಹುಡುಕಾಟ ನಡೆಸಲಾಗಿದೆ.
SCROLL FOR NEXT