ಪ್ರತ್ಯಕ್ಷ ಸಾಕ್ಷಿ 
ದೇಶ

ಪೊಲೀಸರು ಮುಂದಿನಿಂದಲೇ ಆ್ಯಪಲ್ ಸಿಬ್ಬಂದಿ ವಿವೇಕ್ ಶೂಟ್ ಮಾಡಿದರು: ಪ್ರತ್ಯಕ್ಷದರ್ಶಿ

ಪೊಲೀಸ್ ಪೇದೆ ಪ್ರಶಾಂತ್ ಚೌಧರಿ ಅವರು ಆ್ಯಪಲ್‌ ಕಂಪೆನಿಯ ಎಕ್ಸಿಕ್ಯುಟಿವ್‌ ವಿವೇಕ್‌ ತಿವಾರಿ ಅವರನ್ನು ಮುಂದಿನಿಂದಲೇ ಶೂಟ್...

ಲಖನೌ: ಪೊಲೀಸ್ ಪೇದೆ ಪ್ರಶಾಂತ್ ಚೌಧರಿ ಅವರು ಆ್ಯಪಲ್‌ ಕಂಪೆನಿಯ ಎಕ್ಸಿಕ್ಯುಟಿವ್‌ ವಿವೇಕ್‌ ತಿವಾರಿ ಅವರನ್ನು ಮುಂದಿನಿಂದಲೇ ಶೂಟ್ ಮಾಡಿದರು ಎಂದು ಘಟನೆಯ ಪ್ರತ್ಯಕ್ಷ ಸಾಕ್ಷಿಯಾಗಿರುವ ಯುವತಿ ಹೇಳಿದ್ದಾರೆ.
ಅಂದು ನಾವು ಮನೆಗೆ ಬರುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ಪೊಲೀಸರು(ಪ್ರಶಾಂತ್ ಮತ್ತು ಸಂದೀಪ್) ವಿವೇಕ್ ತಿವಾರಿಯನ್ನು ಎದುರುಗಡೆಯಿಂದಲೇ ಗುಂಡಿಕ್ಕಿ ಹತ್ಯೆ ಮಾಡಿದರು. ಇದನ್ನು ಕೆಲವು ಲಾರಿ ಚಾಲಕರು ಸಹ ನೋಡಿದರು. ಆದರೆ ಯಾರು ಸಹಾಯಕ್ಕೆ ಬರಲಿಲ್ಲ ಎಂದು ಪ್ರತ್ಯಕ್ಷದರ್ಶಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕಾರು ನಿಲ್ಲಿಸದ ಹಿನ್ನೆಲೆಯಲ್ಲಿ ಮತ್ತು ಆತ್ಮ ರಕ್ಷಣೆಗಾಗಿ ತಾನು ವಿವೇಕ್ ತಿವಾರಿ ಮೇಲೆ ಗುಂಡು ಹಾರಿಸಿರುವುದಾಗಿ ಪೊಲೀಸ್ ಪೇದೆ ಹೇಳಿದ್ದಾರೆ. 
ಇನ್ನು ವಿವೇಕ್‌ ತಿವಾರಿ ಮರಣೋತ್ತರ ವರದಿ ಬಂದಿದ್ದು ತಿವಾರಿ ಅವರ ಎಡ ಗದ್ದಕ್ಕೆ ತಗುಲಿರುವ ಗುಂಡೇಟಿನಿಂದಲೇ ಅವರ ಸಾವು ಸಂಭವಿಸಿರುವುದು ದೃಢಪಟ್ಟಿದೆ. 
ತಿವಾರಿ ಸಾವು ಆಕಸ್ಮಿಕ ಅವಘಡದಿಂದ ಆದುದಲ್ಲ, ಬದಲು ಗುಂಡೇಟಿನಿಂದ ಆಗಿರುವ ಮಾರಣಾಂತಿಕ ಗಾಯದಿಂದಲೇ ಸಂಭವಿಸಿದೆ ಎಂದು ಮರಣೋತ್ತರ ವರದಿಯಿಂದ ದೃಢ ಪಟ್ಟಿರುವುದಾಗಿ ಮೂಲಗಳು ತಿಳಿಸಿವೆ. 
ತಿವಾರಿಗೆ ಗುಂಡು ಹೊಡೆದ ಪ್ರಕರಣದಲ್ಲಿ , "ನನ್ನದೇನೂ ತಪ್ಪಿಲ್ಲ, ನಾನು ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಿದೆ, ಏಕೆಂದರೆ ಆತ ಮೂರು ಬಾರಿ  ತನ್ನ ಕಾರನ್ನು ನಮ್ಮ ಮೇಲೆ ಹರಿಸಲು ಯತ್ನಿಸಿದ ಎಂದು ಗೋಮತಿನಗರ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ಚೌಧುರಿ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?