ನವದೆಹಲಿ: ಶಿಕ್ಷಣ ಸೆಸ್, ಕೃಷಿ ಸೆಸ್, ಸ್ವಚ್ಛ ಭಾರತ ಸೆಸ್... ಹೀಗೆ ಜನರಿಂದ ಹತ್ತು ಹಲವು ಸೆಸ್ ಗಳನ್ನು ಸಂಗ್ರಹಿಸಿದ ಕೇಂದ್ರ ಸರ್ಕಾರ, ಅದನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳದೆ ಹಾಗೆ ಉಳಿಸಿಕೊಂಡಿದೆ.
ಹಣಕಾಸು ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, 2016-17ನೇ ಸಾಲಿನಲ್ಲಿ ಒಟ್ಟು 1,78,594 ಕೋಟಿ ರುಪಾಯಿ ಸೆಸ್ ಸಂಗ್ರಹಿಸಲಾಗಿದ್ದು, ಈ ಪೈಕಿ 1,00,871 ಕೋಟಿ ರುಪಾಯಿ ಮಾತ್ರ ಬಳಕೆ ಮಾಡಿಕೊಳ್ಳಲಾಗಿದೆ.
ಸಿಎಜಿ ಸಹ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಕ್ಕಾಗಿ ಸಂಗ್ರಹಿಸಿದ ಸೆಸ್ ಅನ್ನು ಬಳಕೆ ಮಾಡದಿರುವುದನ್ನು ಹೈಲೈಟ್ ಮಾಡಿದೆ.
ಸೆಸ್ ಬಳಕೆಯಾಗದಿರುವುದಕ್ಕೆ ಸರ್ಕಾರ ಹಲವು ಕಾರಣಗಳನ್ನು ನೀಡಬಹುದು. ಆದರೆ ಜನರಿಂದ ಹೆಚ್ಚಿನ ಹಣ ಸಂಗ್ರಹಿಸಲು ಸರ್ಕಾರಕ್ಕೆ ಸೆಸ್ ಒಂದು ಸಾಧನವಾಗಿದ್ದು, ಅದು ಬಳಕೆಯಾಗದಿದ್ದರೆ ಜನರಿಗೆ ಅನಗತ್ಯ ಹೊರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆದಾಯವನ್ನು ಹೆಚ್ಚಿಸಿಕೊಳ್ಳಲು ಇದು(ಸೆಸ್) ಒಂದು ವಿಧಾನವಾಗಿದೆ. ಸರ್ಕಾರ ಕೋಟ್ಯಾಧೀಶ ಉದ್ಯಮಿಗಳಿಗೆ ಲಕ್ಷಾಂತರ ಕೋಟಿ ತೆರಿಗೆ ವಿನಾಯ್ತಿ ನೀಡುತ್ತದೆ. ಮತ್ತೊಂದು ಕಡೆ ಸಾಮಾನ್ಯ ಜನರ ಮೇಲೆ ಹೆಚ್ಚುವರಿ ಸೆಸ್ ವಿಧಿಸುತ್ತದೆ. ಸರ್ಕಾರ ಬಡವರಿಂದ ಹಣ ಕಿತ್ತಿಕೊಂಡು ಶ್ರೀಮಂತರಿಗೆ ನೀಡುತ್ತಿದೆ. ಸರ್ಕಾರ ಸೆಸ್ ಹೆಸರಿನಲ್ಲಿ ಸಾಮಾನ್ಯ ಜನರನ್ನು ಹೀರುತ್ತಿದೆ ಕೃಷಿ ತಜ್ಞ ದೇವಿಂದ್ರ ಶರ್ಮಾ ಅವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos