ಸೂರಜ್ ಪಾಲ್ ಅಮು 
ದೇಶ

ದೀಪಿಕಾ ಪಡುಕೋಣೆ ಶಿರಚ್ಚೇದಕ್ಕೆ ಕರೆಕೊಟ್ಟಿದ್ದ ಹರಿಯಾಣ ಬಿಜೆಪಿ ಮುಖಂಡ ಮತ್ತೆ ಪಕ್ಷಕ್ಕೆ ಸೇರ್ಪಡೆ!

"ನನ್ನ ಮನೆಗೆ ನಾನು ಹಿಂತಿರುಗಿದ್ದೇನೆ, ನನಗೆ ಸಂತಸವಾಗುತ್ತಿದೆ" ಬಿಜೆಪಿ ನಾಯಕ ಸೂರಜ್ ಪಾಲ ಅಮು ಹೇಳಿದ್ದಾರೆ.

ಗುರುಗ್ರಾಮ: "ನನ್ನ ಮನೆಗೆ ನಾನು ಹಿಂತಿರುಗಿದ್ದೇನೆ, ನನಗೆ ಸಂತಸವಾಗುತ್ತಿದೆ" ಬಿಜೆಪಿ ನಾಯಕ ಸೂರಜ್ ಪಾಲ್ ಅಮು ಹೇಳಿದ್ದಾರೆ. ಹರಿಯಾಣ ಬಿಜೆಪಿ ಮುಖಂಡನ ರಾಜೀನಾಮೆಯನ್ನು ಪಕ್ಷ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅಮು ಈ ಹೇಳಿಕೆ ನೀಡಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ದೀಪಿಕಾ ಪಡುಕೋಣೆ ನಾಯಕಿಯಾಗಿರುವ "ಪದ್ಮಾವತ್" ಚಿತ್ರದ ಬಿಡುಗಡೆ ವಿವಾದವೆದ್ದಾಗ ಬನ್ಸಾಲಿ ಹಾಗೂ ಪಡುಕೋಣೆಯ ತಲೆ ಕಡಿದವರಿಗೆ 10 ಕೋಟಿ ರು. ಬಹುಮಾನ ನೀಡುತ್ತೇನೆ ಎಂದು ಘೋಷಿಸಿದ್ದ ಸೂರಜ್ ಪಾಲ ಅಮು ಹರಿಯಾಣ ಬಿಜೆಪಿ ಘಟಕದ ಹಲವು ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದರು.
"ನಾನು ಬಿಜೆಪಿ ರಾಜ್ಯ ಘಟಕದ ಹಲವು ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದೆ ಆದರೆ ಇಂದು ಹರಿಯಾಣ ಬಿಜೆಪಿ ಮುಖ್ಯಸ್ಥ ಸುಭಾಷ್ ಬರಾಲಾ ಇದನ್ನು ತಿರಸ್ಕರಿಸಿದ್ದಾರೆ.29-30 ವರ್ಷಗಳ ಕಾಲ ನಾನು ಪಕ್ಷ ಮತ್ತು ಅದರ ಅಭಿವೃದ್ದಿಗಾಗಿ ಶ್ರಮಿಸಿಯೂ ಪಕ್ಷದಿಂದ ದೂರವಾಗಬೇಕಾಗಿ ಬಂದಿದ್ದ ಈ 8 ತಿಂಗಳುಗಳು ನನಗೆ ಬಹಳ ಕಠಿಣ ಸಮಯವಾಗಿತ್ತು.ದರೆ, ನಾನು ವಿವಿಧ ಸಾಮಾಜಿಕ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದೆ, ಈಗ ನನಗೆ ನನ್ನ ಮನೆಗೆ ಹಿಂತಿರುಗಿದಷ್ಟು ಸಂತಸವಾಗಿದೆ"
ಕರ್ಣಿ ಸೇನಾ ಮುಖ್ಯಸ್ಥರಾಗಿರುವ ಸೂರಜ್ ಪದ್ಮಾವತ್" ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನಿಡಿದ್ದರು.ಈ ಹೇಳಿಕೆ ವಿಚಾರವಾಗಿ ಕಾರಣ ತಿಳಿಸುವಂತೆ ಪಕ್ಷ ಅವರಿಗೆ ನೋಟೀಸ್ ಜಾರಿ ಮಾಡಿದ್ದಾಗೆ ತಮ್ಮ ಹುದ್ದೆಗೆ ಅವರು ರಾಜೀನಾಮೆ ಸಲ್ಲಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT