ದೇಶ

ಹಿಮಾಚಲ ಪ್ರದೇಶ: ರಸ್ತೆ ಅಪಘಾತದಲ್ಲಿ ಮೂವರು ಸಾವು, 10 ಮಂದಿಗೆ ಗಾಯ

Nagaraja AB

ಶಿಮ್ಲಾ:  ಹಿಮಾಚಲ ಪ್ರದೇಶ ರಾಜಧಾನಿ ಶಿಮ್ಲಾದ ಕಾಸುಮ್ಟಿಯಿಂದ  ರೊರು ಕಡೆಗೆ ತೆರಳುತ್ತಿದ್ದ 14 ಪ್ರಯಾಣಿಕರಿದ್ದ ಮಿನಿ ಬಸ್ ವೊಂದು ಅಪಘಾತಕ್ಕೀಡಾಗಿದ್ದು,  ಕನಿಷ್ಠ ಮೂವರು ಸಾವನ್ನಪ್ಪಿದ್ದು, 10 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಚಾಹೈಲಾ ಬಜಾರ್  ಬಳಿಯ ಸೇತುವೆ ಬಳಿಕ ಕಳೆದ ರಾತ್ರಿ 7-30 ರ ಸುಮಾರಿನಲ್ಲಿ ಈ ಅಪಘಾತ ಸಂಭವಿಸಿದೆ.
ಹಿಮಾಚಲ ಪ್ರದೇಶದ ಶಿಕ್ಷಣ ಸಚಿವ ಸುರೇಶ್ ಭಾರದ್ವಾಜ್ ಅವರ ಸಹೋದರ ಕೂಡಾ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ.
SCROLL FOR NEXT