ವಿಲ್ ಸ್ಮಿತ್ 
ದೇಶ

ಹಿಮಾಲಯದ ದೇವಾಲಯದಲ್ಲಿ ಪೂಜೆ ನೆರವೇರಿಸಿದ ಹಾಲಿವುಡ್ ನಟ ವಿಲ್ ಸ್ಮಿತ್!

ವಿದೇಶಿಗರು ಭಾರತದ ಆಚರಣೆಗಳಿಗೆ ಮಾರುಹೋಗುತ್ತಿರುವುದು ಇತ್ತೀಚಿನ ದಿನಗಳ ಟ್ರೆಂಡಿಂಗ್ ವಿಷಯ.

ಡೆಹ್ರಾಡೂನ್: ವಿದೇಶಿಗರು ಭಾರತದ ಆಚರಣೆಗಳಿಗೆ ಮಾರುಹೋಗುತ್ತಿರುವುದು ಇತ್ತೀಚಿನ ದಿನಗಳ ಟ್ರೆಂಡಿಂಗ್ ವಿಷಯ. ಕ್ರಿಕೆಟ್ ಆಟಗಾರರು, ಉದ್ಯಮಿಗಳು ಸೇರಿದಂತೆ ಅಂತಾರಾಷ್ಟ್ರೀಯ ಖ್ಯಾತ ನಾಮರು ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ಈ ಬಾರಿ ಈ ಪಟ್ಟಿಗೆ ಸೇರಿಕೊಂಡಿರುವುದು ಹಾಲಿವುಡ್ ನ ನಟ ವಿಲ್ ಸ್ಮಿತ್.
ಭಾರತದಲ್ಲಿರುವ ದೇವಾಲಯಗಳತ್ತ ಆಕರ್ಷಿತರಾಗಿರುವ ವಿಲ್ ಸ್ಮಿತ್ ಜ್ಯೋತಿಷಿಯೊಬ್ಬರ ಸಲಹೆಯಂತೆ ನಿರ್ದಿಷ್ಟ ಗ್ರಹ ಸ್ಥಿತಿಗಳಿಂದ ಉಂಟಾಗುವ ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಹರಿದ್ವಾರದಲ್ಲಿರುವ ಶಿವನ ಮಂದಿರದಲ್ಲಿ ಪೂಜೆ
ಮಾಡಿಸಿದ್ದಾರೆ. 
ಪ್ರದೀಪ್ ಮಿಶ್ರಪುರಿ ಎಂಬ ಜ್ಯೋತಿಷಿ ನೀಡಿರುವ ಮಾಹಿತಿಯ ಪ್ರಕಾರ ಶನಿ ಗ್ರಹದ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ವಿಲ್ ಸ್ಮಿತ್ ಶಿವನ ದೇವಾಲಯದಲ್ಲಿ ಪೂಜೆ ಮಾಡಿಸಿದ್ದಾರಂತೆ. 
"ವಿಲ್ ಸ್ಮಿತ್ ಅವರ ಜಾತಕವನ್ನು ಪರಿಶೀಲಿಸಿ ಅವರ ಜೀವನದಲ್ಲಿ ನಡೆದಿರುವ ಮುಖ್ಯ ಘಟನಾವಳಿಗಳನ್ನು ಹೇಳಿದೆ. ಭವಿಷ್ಯ ವಿಶ್ಲೇಷಣೆಯ ನಿಖರತೆಗೆ ಅಚ್ಚರಿಗೊಂಡ ವಿಲ್ ಸ್ಮಿತ್ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿರುವ ಸಲಹೆಯನ್ನು ಪರಿಗಣಿಸಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ" ಎಂದು ಪ್ರದೀಪ್ ಮಿಶ್ರಪುರಿ ಹೇಳಿದ್ದಾರೆ. 
ಇದೇ ವೇಳೆ ಗಂಗಾ ನದಿ ತೀರದಲ್ಲಿ ಗಂಗಾ ಆರತಿಯನ್ನೂ ಸಹ ವಿಲ್ ಸ್ಮಿತ್ ಸಲ್ಲಿಸಿದ್ದು, "ಭಾರತೀಯ ಆಧ್ಯಾತ್ಮ ಹಾಗೂ ಜ್ಯೋತಿಷ್ಯಕ್ಕೆ ಆಳವಾದ ನಂಟಿರುವುದು ನನಗೆ ಗೋಚರಿಸಿದೆ" ಎಂದು ಹೇಳಿದ್ದಾರೆ. ರುದ್ರಾಭಿಷೇಕ ಮಾಡುವುದಕ್ಕೂ ಮುನ್ನ ವಿಲ್ ಸ್ಮಿತ್ ಪ್ರತಿ ಪೂಜೆಯ ಅರ್ಥ ಹಾಗೂ ಮಹತ್ವ ತಿಳಿದುಕೊಂಡು ನಂತರ ಪೂಜೆ ಮಾಡಿದ್ದಾರೆ ಎಂದು ಜ್ಯೋತಿಷಿ ಹೇಳಿದ್ದಾರೆ.  ಹಾಲಿವುಡ್ ನ ಹಲವು ನಟರು ಪ್ರದೀಪ್ ಮಿಶ್ರ ಪುರಿಯನ್ನು ಸಂಪರ್ಕಪಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT