ವಿಲ್ ಸ್ಮಿತ್ 
ದೇಶ

ಹಿಮಾಲಯದ ದೇವಾಲಯದಲ್ಲಿ ಪೂಜೆ ನೆರವೇರಿಸಿದ ಹಾಲಿವುಡ್ ನಟ ವಿಲ್ ಸ್ಮಿತ್!

ವಿದೇಶಿಗರು ಭಾರತದ ಆಚರಣೆಗಳಿಗೆ ಮಾರುಹೋಗುತ್ತಿರುವುದು ಇತ್ತೀಚಿನ ದಿನಗಳ ಟ್ರೆಂಡಿಂಗ್ ವಿಷಯ.

ಡೆಹ್ರಾಡೂನ್: ವಿದೇಶಿಗರು ಭಾರತದ ಆಚರಣೆಗಳಿಗೆ ಮಾರುಹೋಗುತ್ತಿರುವುದು ಇತ್ತೀಚಿನ ದಿನಗಳ ಟ್ರೆಂಡಿಂಗ್ ವಿಷಯ. ಕ್ರಿಕೆಟ್ ಆಟಗಾರರು, ಉದ್ಯಮಿಗಳು ಸೇರಿದಂತೆ ಅಂತಾರಾಷ್ಟ್ರೀಯ ಖ್ಯಾತ ನಾಮರು ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ಈ ಬಾರಿ ಈ ಪಟ್ಟಿಗೆ ಸೇರಿಕೊಂಡಿರುವುದು ಹಾಲಿವುಡ್ ನ ನಟ ವಿಲ್ ಸ್ಮಿತ್.
ಭಾರತದಲ್ಲಿರುವ ದೇವಾಲಯಗಳತ್ತ ಆಕರ್ಷಿತರಾಗಿರುವ ವಿಲ್ ಸ್ಮಿತ್ ಜ್ಯೋತಿಷಿಯೊಬ್ಬರ ಸಲಹೆಯಂತೆ ನಿರ್ದಿಷ್ಟ ಗ್ರಹ ಸ್ಥಿತಿಗಳಿಂದ ಉಂಟಾಗುವ ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಹರಿದ್ವಾರದಲ್ಲಿರುವ ಶಿವನ ಮಂದಿರದಲ್ಲಿ ಪೂಜೆ
ಮಾಡಿಸಿದ್ದಾರೆ. 
ಪ್ರದೀಪ್ ಮಿಶ್ರಪುರಿ ಎಂಬ ಜ್ಯೋತಿಷಿ ನೀಡಿರುವ ಮಾಹಿತಿಯ ಪ್ರಕಾರ ಶನಿ ಗ್ರಹದ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ವಿಲ್ ಸ್ಮಿತ್ ಶಿವನ ದೇವಾಲಯದಲ್ಲಿ ಪೂಜೆ ಮಾಡಿಸಿದ್ದಾರಂತೆ. 
"ವಿಲ್ ಸ್ಮಿತ್ ಅವರ ಜಾತಕವನ್ನು ಪರಿಶೀಲಿಸಿ ಅವರ ಜೀವನದಲ್ಲಿ ನಡೆದಿರುವ ಮುಖ್ಯ ಘಟನಾವಳಿಗಳನ್ನು ಹೇಳಿದೆ. ಭವಿಷ್ಯ ವಿಶ್ಲೇಷಣೆಯ ನಿಖರತೆಗೆ ಅಚ್ಚರಿಗೊಂಡ ವಿಲ್ ಸ್ಮಿತ್ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿರುವ ಸಲಹೆಯನ್ನು ಪರಿಗಣಿಸಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ" ಎಂದು ಪ್ರದೀಪ್ ಮಿಶ್ರಪುರಿ ಹೇಳಿದ್ದಾರೆ. 
ಇದೇ ವೇಳೆ ಗಂಗಾ ನದಿ ತೀರದಲ್ಲಿ ಗಂಗಾ ಆರತಿಯನ್ನೂ ಸಹ ವಿಲ್ ಸ್ಮಿತ್ ಸಲ್ಲಿಸಿದ್ದು, "ಭಾರತೀಯ ಆಧ್ಯಾತ್ಮ ಹಾಗೂ ಜ್ಯೋತಿಷ್ಯಕ್ಕೆ ಆಳವಾದ ನಂಟಿರುವುದು ನನಗೆ ಗೋಚರಿಸಿದೆ" ಎಂದು ಹೇಳಿದ್ದಾರೆ. ರುದ್ರಾಭಿಷೇಕ ಮಾಡುವುದಕ್ಕೂ ಮುನ್ನ ವಿಲ್ ಸ್ಮಿತ್ ಪ್ರತಿ ಪೂಜೆಯ ಅರ್ಥ ಹಾಗೂ ಮಹತ್ವ ತಿಳಿದುಕೊಂಡು ನಂತರ ಪೂಜೆ ಮಾಡಿದ್ದಾರೆ ಎಂದು ಜ್ಯೋತಿಷಿ ಹೇಳಿದ್ದಾರೆ.  ಹಾಲಿವುಡ್ ನ ಹಲವು ನಟರು ಪ್ರದೀಪ್ ಮಿಶ್ರ ಪುರಿಯನ್ನು ಸಂಪರ್ಕಪಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT