ನವದೆಹಲಿ: ಶೀಘ್ರವೇ ಅಲಹಾಬಾದ್ ಅನ್ನು ಪ್ರಯಾಗ್ ರಾಜ್ ಎಂದು ನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಅಲಹಾಬಾದ್ ಗೆ ಮರುನಾಮಕರಣ ಮಾಡುವ ಚಿಂತನೆ ಬಗ್ಗೆ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾ. ಮಾರ್ಕಾಂಡೇಯ ಕಾಟ್ಜು ಪ್ರತಿಕ್ರಿಯೆ ನೀಡಿದ್ದಾರೆ.
ಉತ್ತರ ಪ್ರದೇಶದ ಅಲಹಾಬಾದ್ ಗೆ ಪ್ರಯಾಗ್ ರಾಜ್ ಎಂದು ಮರುನಾಮಕರಣ ಮಾಡುತ್ತಿರುವ ವಿಚಾರ ಸ್ವಾಗತಾರ್ಹ ಆದರೆ ಇಷ್ಟೇ ಸಾಕಾಗುವುದಿಲ್ಲ ಉತ್ತರ ಪ್ರದೇಶದಲ್ಲಿನ ಇನ್ನೂ 18 ನಗರಗಳ ಹೆಸರುಗಳನ್ನು ಬದಲಾವಣೆ ಮಾಡಬೇಕು ಎಂದು ಪಟ್ಟಿ ನೀಡಿದ್ದಾರೆ.
ಬಾಬಾರ್ ಕಾಲದಲ್ಲಿ ಆಗಿದ್ದ ನಾಮಕರಣಗಳನ್ನು ಈಗ ಬದಲಾವಣೆ ಮಾಡಿ ಎಂದು ಮಾರ್ಕಾಂಡೇಯ ಕಾಟ್ಜು ಹೇಳಿದ್ದಾರೆ. ಅಲೀಘರ್ ನ್ನು ಅಶ್ವತ್ಥಾಮನಗರ, ಆಗ್ರಾವನ್ನು ಅಗಸ್ತ್ಯನಗರ, ಗಾಝಿಯಾಪುರವನ್ನು ಗಣೇಶ್ ಪುರ ಹೀಗೆ 18 ನಗರಗಳ ಹೆಸರುಗಳನ್ನು ಮರುನಾಮಕರಣ ಮಾಡಬೇಕೆಂದು ಟ್ವಿಟರ್ ನಲ್ಲಿ ಕಾಟ್ಜು ಹೇಳಿದ್ದಾರೆ.