ನಾವು ಕಾನೂನು ಪಾಲನೆ ಮಾಡುತ್ತಿದ್ದೇವೆ, ಅಹಿತಕರ ವಾತಾವರಣವನ್ನು ಸೃಷ್ಟಿ ಮಾಡುತ್ತಿಲ್ಲ: ಕೇರಳ ಪೊಲೀಸ್ 
ದೇಶ

ಕಾನೂನಷ್ಟೇ ಪಾಲನೆ ಮಾಡುತ್ತಿದ್ದೇವೆ, ಅಹಿತಕರ ವಾತಾವರಣ ಸೃಷ್ಟಿ ಮಾಡುವುದಿಲ್ಲ: ಕೇರಳ ಪೊಲೀಸ್

ಶಬರಿಮಲೆಯಲ್ಲಿ ಪೊಲೀಸರು ಅಹಿತಕರ ವಾತಾವರಣ ಸೃಷ್ಟಿ ಮಾಡುವುದಿಲ್ಲ. ಭಕ್ತಾದಿಗಳೊಂದಿಗೆ ಘರ್ಷಣೆಯುಂಟಾಗುವುದು ನಮಗಿಷ್ಟವಿಲ್ಲ. ನಾವು ಕಾನೂನಷ್ಟೇ ಪಾಲನೆ ಮಾಡುತ್ತಿದ್ದೇವೆಂದು ಕೇರಳ ಪೊಲೀಸರು ಶುಕ್ರವಾರ ಹೇಳಿದ್ದಾರೆ...

ತಿರುವನಂತಪುರ: ಶಬರಿಮಲೆಯಲ್ಲಿ ಪೊಲೀಸರು ಅಹಿತಕರ ವಾತಾವರಣ ಸೃಷ್ಟಿ ಮಾಡುವುದಿಲ್ಲ. ಭಕ್ತಾದಿಗಳೊಂದಿಗೆ ಘರ್ಷಣೆಯುಂಟಾಗುವುದು ನಮಗಿಷ್ಟವಿಲ್ಲ. ನಾವು ಕಾನೂನಷ್ಟೇ ಪಾಲನೆ ಮಾಡುತ್ತಿದ್ದೇವೆಂದು ಕೇರಳ ಪೊಲೀಸರು ಶುಕ್ರವಾರ ಹೇಳಿದ್ದಾರೆ. 
ಶಬರಿಮಲೆಯಲ್ಲಿ ಹಿಂಸಾಚಾರ ಹೆಚ್ಚಾಗಿರುವ ಹಿನ್ನಲೆಯಲ್ಲಿ ಭಕ್ತಾದಿಗಳೊಂದಿಗೆ ಮಾತುಕತೆ ನಡೆಸಿರುವ ಕೇರಳ ಐಜಿ ಎಸ್.ಶ್ರೀಜಿತ್ ಅವರು, ಶಬರಿಮಲೆಯಲ್ಲಿ ಪೊಲೀಸರು ಅಹಿತಕರ ವಾತಾವರಣ ಸೃಷ್ಟಿ ಮಾಡುವುದಿಲ್ಲ. ಭಕ್ತಾದಿಗಳೊಂದಿಗೆ ಘರ್ಷಣೆಯುಂಟಾಗುವುದು ನಮಗಿಷ್ಟವಿಲ್ಲ. ನಾವು ಕಾನೂನಷ್ಟೇ ಪಾಲನೆ ಮಾಡುತ್ತಿದ್ದೇವೆ. ಮಹಿಳೆಯರ ಪ್ರವೇಶ ಕುರಿತು ಉನ್ನತಾಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಸ್ಥಳದ ಪರಿಸ್ಥಿತಿ ಕುರಿತಂತೆ ಅವರಿಗೆ ವಿವರಣೆ ನೀಡುತ್ತಿದ್ದೇವೆಂದು ಹೇಳಿದ್ದಾರೆ. 
ಈ ನಡುವೆ ತೀವ್ರ ಪ್ರತಿಭಟನೆಗಳ ನಡುವೆಯೂ ಇಂದು ಓರ್ವ ಪತ್ರಕರ್ತೆ ಹಾಗೂ ಮತ್ತೋರ್ವ ಮಹಿಳೆ ಭಾರೀ ಭದ್ರತೆಯೊಂದಿಗೆ ಅಯ್ಯಪ್ಪನ ಸನ್ನಿಧಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. 
ಬುಲೆಟ್ ಫ್ರೂಫ್ ಚಾಕೆಟ್ ಹಾಗೂ ಹೆಲ್ಮೆಟ್ ಧರಿಸಿರುವ ಮಹಿಳೆಯರು ಪೊಲೀಸರ ಸರ್ಪಗಾವಲೊಂದಿಗೆ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದಾರೆ. 
ದೇಶದ ಸರ್ವೋನ್ನತ ನ್ಯಾಯಾಲಯವು 10ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡಿತ್ತು. ಇದರಂತೆ ಸುಪ್ರೀಂಕೋರ್ಟ್ ಆದೇಶದ ಬಳಿಕ ಬುಧವಾರವಷ್ಟೇ ದೇಗುಲದ ಬಾಗಿಲನ್ನು ತೆರೆಯಲಾಗಿತ್ತು. ಆದರೆ, ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ಬಿಟ್ಟು ಇನ್ನುಳಿದ 6 ರಾಜ್ಯಗಳಿಗೆ SIR ಗಡುವನ್ನು ವಿಸ್ತರಿಸಿದ ಚುನಾವಣಾ ಆಯೋಗ!

ಅತ್ಯುನ್ನತ ಶಿಕ್ಷಣ ಪಡೆದು ಅಮೆರಿಕ ಬಿಟ್ಟು ಹೋಗುವುದು ನಾಚಿಕೆಗೇಡಿನ ಸಂಗತಿ: ಭಾರತೀಯರ ವಿರುದ್ಧ ಟ್ರಂಪ್ ಆಕ್ರೋಶ

ಪೊಲೀಸ್, ಅರಣ್ಯ ಇಲಾಖೆಗಳಲ್ಲಿ ಕ್ರೀಡಾ ಪಟುಗಳಿಗೆ ಮೀಸಲಾತಿ ಜಾರಿಗೆ- ಸಿಎಂ ಸಿದ್ದರಾಮಯ್ಯ

ಅರುಣಾಚಲ ಪ್ರದೇಶ: ಕಂದಕಕ್ಕೆ ಉರುಳಿದ ಟ್ರಕ್, 18 ಮಂದಿ ಸಾವು, ಏಳು ಜನ ನಾಪತ್ತೆ! ಎರಡು ದಿನಗಳ ಬಳಿಕ ಘಟನೆ ಬೆಳಕಿಗೆ

ದೀರ್ಘಕಾಲದ ನಂತರ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಆಹ್ವಾನ ಸ್ವೀಕರಿಸಿದ ಪ್ರಧಾನಿ ಮೋದಿ; ಶೀಘ್ರವೇ...

SCROLL FOR NEXT