ಜೈಪುರ: ಭಾರತ ದೇಶಕ್ಕೆ 1947 ರಲ್ಲಿ ಸ್ವಾತಂತ್ರ್ಯ ಬಂದಿದೆ, ಆದರೆ ಬ್ರಿಟಿಷರು ಇನ್ನೂ 100 ವರ್ಷಗಳ ಕಾಲ ಹೆಚ್ಚಿಗೆ ದೇಶವನ್ನಾಳಬೇಕಿತ್ತು ಎಂದು ಬಿಎಸ್ ಪಿ ಮುಖಂಡ ಧರ್ಮವೀರ್ ಸಿಂಗ್ ಹೇಳಿದ್ದಾರೆ.
ರಾಜಸ್ತಾನದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ, ದರ್ಮವೀರ್ ಸಿಂಗ್, ಬ್ರಿಟಿಷರು ಇನ್ನು 100 ವರ್ಷ ಹೆಚ್ಚಿನ ಕಾಲ ಭಾರತವನ್ನಾಳಬೇಕಿತ್ತು. ಆಗ ಎಸ್ ಸಿ, ಎಸ್ ಟಿ, ಮತ್ತು ಒಬಿಸಿ ವರ್ಗ ತುಳಿತಕ್ಕೊಳಗಾಗುತ್ತಿರಲಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ,
ಡಾ. ಅಂಬೇಡ್ಕರ್ ಅವರಿಗೆ ಅಧ್ಯಯನ ನಡೆಸಲು ಬ್ರಿಟಿಷರು ಅವಕಾಶ ನೀಡದೇ ಇದ್ದಿದ್ದರೇ ಹಿಂದುಳಿದ ವರ್ಗಗಳಿಗೆ ಸಹಾಯ ಮಾಡಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ, ಬ್ರಿಟಿಷರ ಆಡಳಿತದ ಅವಧಿಯಲ್ಲಿ ಅಂಬೇಡ್ಕರ್ ವಿದ್ಯಾಭ್ಯಾಸ ನಡೆಸಿದರು. ಅವರು ಬರದಿದ್ದರೇ ಬಾಬಾ ಸಾಹೇಬ್ ಗೆ ಯಾವ ಶಾಲೆಯಲ್ಲೂ ಪ್ರವೇಶ ದೊರೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಧರ್ಮವೀರ್ ಹೇಳಿಕೆಗೆ ವಿರೋದ ಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತ ಪಡಿಸಿವೆ. ಸ್ವಾತಂತ್ರ್ಯ ತಂದುಕೊಂಡಲು ಮಾಡಿದ ತ್ಯಾಗ ಬಲಿದಾನ ಗಳಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos