ಹರಿನಾರಾಯಣ್ ರಾಜ್ ಭರ್ 
ದೇಶ

ಮಹಿಳೆಯರಂತೆ ಪುರುಷರಿಗೂ ರಾಷ್ಟ್ರೀಯ ಆಯೋಗ ಬೇಕು: ಬಿಜೆಪಿ ಸಂಸದ

ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಲೋಕಸಭಾ ಸದಸ್ಯರೊಬ್ಬರು ಪತ್ನಿಯಿಂದ ಪೀಡನೆಗೊಳಗಾದ ಪುರುಷರಿಗಾಗಿ ರಾಷ್ಟ್ರೀಯ ಪುರುಷರ ಆಯೋಗ ರಚನೆಯಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನವದೆಹಲಿ: ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಲೋಕಸಭಾ ಸದಸ್ಯರೊಬ್ಬರು ಪತ್ನಿಯಿಂದ  ಪೀಡನೆಗೊಳಗಾದ ಪುರುಷರಿಗಾಗಿ ರಾಷ್ಟ್ರೀಯ ಪುರುಷರ ಆಯೋಗ ರಚನೆಯಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಉತ್ತರ ಪ್ರದೇಶದ  ಬಿಜೆಪಿ ಸಂಸದ ಹರಿನಾರಾಯಣ್ ರಾಜ್ ಭರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು ಪುರುಷರ ಶಾಸನಬದ್ಧ ಸಂಸ್ಥೆ ಸಹ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಮನಾದ ಸ್ಥಾನ ಹೊಂದಿರಬೇಕು ಎಂದು ಒತ್ತಾಯಿಸಿದ್ದಾರೆ.
"ರಾಷ್ಟ್ರೀಯ ಮಹಿಳಾ ಆಯೋಗದಂತೆಯೇ ಪುರುಷರ ಆಯೋಗವನ್ನೂ ರಚಿಸಬೇಕು.ನೊಂದ ಪುರುಷರಿಗೆ ಸಹ ಒಂದು ವೇದಿಕೆಯ ಅಗತ್ಯವಿದೆ. ಪ್ರಸ್ತುತ ಸಮಯದಲ್ಲಿ, ಪುರುಷರು ತಮ್ಮ ಹೆಂಡತಿಯರ ಬಳಿ ಎದುರಿಸುವ ಕಷ್ಟಗಳಿಗೆ ಪರಿಹಾರ ಸೂಚಿಸಲು ಯಾವುದೇ ಶಾಸನಬದ್ದ ಸಂಸ್ಥೆಗಳಿಲ್ಲ." ಎ ಎನ್ ಐಗೆ ನಿಡಿದ ಸಂದರ್ಶನದಲ್ಲಿ ರಾಜ್ ಭರ್ ಹೇಳಿದ್ದಾರೆ.
ಕಳೆದ ತಿಂಗಳು ನಡೆದ ಮಾನ್ಸೂನ್ ಅಧಿವೇಶನದಲ್ಲಿ ರಾಜ್ ಭರ್ ಈ ಪ್ರಸ್ತಾಪವನ್ನಿತ್ತಿದ್ದರು. ಇದರ ಬಳಿಕ ಅವರು ದೇಶಾದ್ಯಂತದ ಪುರುಷ ಸಮುದಾಯದ ವ್ಯಾಪಕ ಬೆಂಬಲ ಗಳಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
 "ನಾನು ದೇಶದ ವಿವಿಧ ಭಾಗಗಳಿಂದ 5000 ಕ್ಕಿಂತ ಹೆಚ್ಚು ಸಂದೇಶಗಳನ್ನು ಪಡೆದಿದ್ದೇನೆ, ವಿದೇಶದಲ್ಲಿ ನೆಲೆಸಿದವರಲ್ಲಿ ಸಹ ಕೆಲವರು  ಕಲ್ಪನೆಯನ್ನು ಬೆಂಬಲಿಸಿದರು ಮತ್ತು ಶಾಸನಬದ್ಧ ಆಯೋಗ ರಚನೆಗೆ ಸೂಚಿಸಿದ್ದಾರೆ" ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT