ನವದೆಹಲಿ: ಬಿಜೆಪಿ ಮುಂದಿನ 50 ವರ್ಷಗಳ ಕಾಲ ಅಧಿಕಾರ ನಡೆಸುವ ಹಗಲುಗನಸು ಕಾಣುತ್ತಿದೆ. ಆದರೆ ಭಾರತ ಉತ್ತರ ಕೋರಿಯಾ ಆಗಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸೋಮವಾರ ಬಿಜೆಪಿಗೆ ತಿರುಗೇಟು ನೀಡಿದೆ.
ನಮ್ಮ ಪಕ್ಷ ಮುಂದಿನ 50 ವರ್ಷ ಆಡಳಿತ ನಡೆಸಲಿದೆ ಎಂಬ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೇವಾಲ ಅವರು, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದವರು ಹಾಗೂ ಸಂವಿಧಾನ ಮತ್ತು ಅದರ ಮೌಲ್ಯಗಳನ್ನು ನಾಶಪಡಿಸಲು ಬಯಸುವವರು ಮಾತ್ರ ಇಂತಹ ಹೇಳಿಕೆ ನೀಡುತ್ತಾರೆ ಎಂದರು.
ಅಮಿತ್ ಶಾ ಅವರ ಹೇಳಿಕೆ, 'ಮುಂಗೇರಿಲಾಲ್ ಕೆ ಹಸೀನ್ ಸಪ್ನೆ'(ಇದೊಂದು ಪ್ರಸಿದ್ಧ ಧಾರವಾಹಿ, ಇದರಲ್ಲಿ ಪ್ರಮುಖ ಪಾತ್ರಧಾರಿ ಯಾವಾಗಲೂ ಹಗಲುಗನಸು ಕಾಣುತ್ತಾನೆ) ಎಂದು ಸುರ್ವೇವಾಲ ಅವರು ಟೀಕಿಸಿದ್ದಾರೆ.
ಆದರೆ, ಭಾರತ ಉತ್ತರ ಕೋರಿಯಾ ಆಗಲು ಸಾಧ್ಯವೇ ಇಲ್ಲ. ಏಕೆಂದರೆ ಇಲ್ಲಿ ಜಾಗೃತ ಪತ್ರಕರ್ತರು, ಜಾಗೃತ ರಾಜಕೀಯ ಪಕ್ಷಗಳು ಮತ್ತು ಅತ್ಯಂತ ಜಾಗೃತ ಮತದಾರರಿದ್ದು, ನಿಮ್ಮನ್ನು ಅಧಿಕಾರದಿಂದ ನೆಲಕ್ಕೆ ಉರುಳಿಸಲು ತಡವಾಗುವುದಿಲ್ಲ ಎಂದು ಸುರ್ಜೇವಾಲ ಅವರು ಸುದ್ದಿಗಾರರಿಗೆ ತಿಳಿಸಿದರು.
ನಿನ್ನೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯನ್ನು ಉದ್ದೇಶಿಸಿ ಮಾತನಾಡಿದ್ದ ಅಮಿತ್ ಶಾ, ಮುಂದಿನ 50 ವರ್ಷಗಳ ಕಾಲ ಬಿಜೆಪಿ ದೇಶ ಆಳಲಿದೆ. ಬಿಜೆಪಿಯನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಎಂದಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos