ದೇಶ

ನಿರುದ್ಯೋಗ, ಹತಾಶೆಯಿಂದ ಯುವಕರಿಂದ ಅತ್ಯಾಚಾರ: ಬಿಜೆಪಿ ಶಾಸಕಿ

Shilpa D
ಚಂಡಿಗಡ: ನಿರುದ್ಯೋಗ ಹಾಗೂ ಹತಾಶೆಯಿಂದ ಬಳಲಿದ ಯುವಕರಿಂದಾಗಿ ಅತ್ಯಾಚಾರದಂತ ಅಪರಾಧ ಪ್ರಕರಣಗಳು ನಡೆಯುತ್ತವೆ ಎಂದು ಬಿಜೆಪಿ  ನಾಯಕಿ ಹಾಗೂ ಹರ್ಯಾಣ ಶಾಸಕಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ  ಶಾಸಕಿ ಪ್ರೇಮಲತಾ ಸಮಾಜದಲ್ಲಿ ನಿರುದ್ಯೋಗದಿಂದ ಬೇಸತ್ತ ಯುವಕರು ಇಂಥಹ ಅಪರಾಧಗಳಲ್ಲಿ ಭಾಗಿಯಾಗುತ್ತಾರೆ ಎಂದು ಹೇಳಿದ್ದಾರೆ.
ಹರ್ಯಾಣದ ನಾರ್ನಾಲ್ ನಲ್ಲಿ  19 ವರ್ಷದ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಈ ಹೇಳಿಕೆ ನೀಡಿದ್ದಾರೆ.
ರಿವಾರಿ ಆಸ್ಪತ್ರೆಯಲ್ಲಿ ಸಂತ್ರಸ್ತೆಗೆ ಚಿಕಿತ್ಸೆ ನೀಡಲಾಗುತ್ತಿದೆ,ಆಘಾತಕ್ಕೊಳಗಾಗಿದ್ದ ಆಕೆ ಸದ್ಯ ಚೇತರಿಸಿಕೊಳ್ಳುತ್ತಿದ್ದಾಳೆ, ಆಕೆ ಎಲ್ಲಾ ರೀತಿ ವೈದ್ಯಕೀಯ ಪರಿಕ್ಷೆ ಮುಗಿದಿದೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ.
SCROLL FOR NEXT