ದೇಶ

ನಾನು ಸಚಿವ, ನನಗೆ ಇಂಧನ ದರ ಏರಿಕೆಯಿಂದ ತೊಂದರೆಯಾಗಿಲ್ಲ: ರಾಮದಾಸ್ ಅತಾವಲೆ

Shilpa D
ಜೈಪುರ: ನಾನು ಸಚಿವ, ಹೀಗಾಗಿ ನನಗೆ ಇಂಧನ ದರ ಏರಿಕೆಯಿಂದ ಯಾವುದೇ ತೊಂದರೆಯಾಗಿಲ್ಲ ಎಂದು ಕೇಂದ್ರ ಸಚಿವ ರಾಮದಾಸ್ ಆಠವಲೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಧನ ದರ ಏರಿಕೆಯಿಂದ ನನಗೆ ತೊಂದರೆಯಾಗುತ್ತಿಲ್ಲ, ನಾನು ಸಚಿವ ಸ್ಥಾನ ಕಳೆದು ಕೊಂಡರೇ ಆಗ ನನಗೆ ತೈಲ ದರ ಏರಿಕೆಯಿಂದ ನಾನು ಬಳಲುತ್ತಿದ್ದೆ ಎಂದು ಹೇಳಿದ್ದಾರೆ.
ಬೆಲೆ ಏರಿಕೆಯಿಂದ ಸಾಮಾನ್ಯ ಜನರು, ತೊಂದರೆ ಅನುಭಿಸುತ್ತಿದ್ದಾರೆ, ಇಂಧನ ಬೆಲೆ ಕಡಿಮೆ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ಆಯಾ ರಾಜ್ಯಗಳು ಇಂಧನದ ಮೇಲೆ ವಿಧಿಸುವ ತೆರಿಗೆ ಕಡಿತಗೊಳಿಸಿದೇ ಮಾತ್ರ ಬೆಲೆ ಏರಿಕೆ ತಡೆಗಟ್ಟಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
SCROLL FOR NEXT