ಕರುಣಾನಿಧಿ 
ದೇಶ

ಕರುಣಾನಿಧಿ ಸಮಾಧಿ ಸ್ಥಳ ಅಣ್ಣಾ ಡಿಎಂಕೆ ನೀಡಿದ ಭಿಕ್ಷೆ: ಎಐಎಡಿಎಂಕೆ ಸಚಿವ

ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಹಿರಿಯ ನಾಯಕ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ರುಣಾನಿಧಿಯ ಸಮಾಧಿಗಾಗಿ ಮರೀನಾ ಬೀಚ್ ನಲ್ಲಿ ಭೂಮಿ ನಿಡಿದ್ದು ಅಣ್ಣಾ ಡಿಎಂಕೆ ನಿಡಿದ "ಭಿಕ್ಷೆ".....

ಚೆನ್ನೈ: ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಹಿರಿಯ ನಾಯಕ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ರುಣಾನಿಧಿಯ ಸಮಾಧಿಗಾಗಿ ಮರೀನಾ ಬೀಚ್ ನಲ್ಲಿ ಭೂಮಿ ನಿಡಿದ್ದು ಅಣ್ಣಾ ಡಿಎಂಕೆ ನಿಡಿದ "ಭಿಕ್ಷೆ" ಎಂದು ತಮಿಳುನಾಡು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಕಡಂಬೂರು ರಾಜು ಹೇಳಿದ್ದಾರೆ.
"ಅಣ್ಣಾ ಸ್ಮಾರಕದಲ್ಲಿ ಭೂಮಿಯನ್ನು ನೀಡಲು ಹೈಕೋರ್ಟ್ ನಿರ್ದೇಶಿಸಿದರೂ, ನಮ್ಮ ಔದಾರ್ಯದಿಂದಾಗಿ ಇದು ಸಾಧ್ಯವಾಗಿದೆ. ಅಣ್ಣಾ ಸ್ಮಾರಕದ ಪಕ್ಕ ಕರುಣಾನಿಧಿಯವರನ್ನು ಸಮಾಧಿ ಮಾಡಲು ಅವರು ಯಾವ ಅರ್ಹತೆ ಹೊಂದಿರಲಿಲ್ಲ. ಒಂದೊಮ್ಮೆ ಮುಖ್ಯಮಂತ್ರಿಯಾಗಿಯೇ ಕರುಣಾನಿಧಿ ಅಸುನೀಗಿದ್ದರೆ ಆಗ ಅವರಿಗೆ ಮರೀನಾ ಬೀಚ್ ನಲ್ಲೇ ಸಮಾಧಿ ಹೊಂದಲು ಸಹಜವಾದ ಅವಕಾಶವಿತ್ತು. ಆದರೂ ನಾವು ದೊಡ್ಡ ಮನಸ್ಸು ಂಆಡಿ ಅವರ ಮೃತದೇಹದ ಸಾರ್ವಜನಿಕ ವೀಕ್ಷಣೆಗೆ ರಾಜಾಜಿ ಹಾಲ್ ನಲ್ಲಿ ಅವಕಾಶ ನೀಡಿದ್ದೆವು" ಸಚಿವರು ಹೇಳಿದ್ದಾರೆ.
ತೂತುಕುಡಿ ಜಿಲ್ಲೆಯ ಕೋವಿಲ್ಪಟ್ಟೈ ನಲ್ಲಿ ನಡೆದ ಸಿ.ಎನ್ ಅಣ್ಣಾದೊರೈ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
"ಅವರು ರಾಜ್ಯದ ಪ್ರಸ್ತುತ ಮುಖ್ಯಮಂತ್ರಿಯಲ್ಲ ಎಂಬ ಕಾರಣದಿಂದ ನಾವು ಕರುಣಾನಿಧಿ ಸಮಾಧಿಗೆ ಮರೀನಾ ಬೀಚ್ ಜ್ಜಾಗ ನೀಡಲು ನಿರಾಕರಿಸಿದ್ದೆವು. ಆದರೆ ಡಿಎಂಕೆ ಪಕ್ಷ ಹೈಕೋರ್ಟ್ ಗೆ ತೆರಳಿ ಸಮಾಧಿಗೆ ಜಾಗ ಪಡೆದರು. ಇದಕ್ಕೆ ನಾವು ಪ್ರತಿಯಾಗಿ ಮೇಲ್ಮನವಿ ಸಲ್ಲಿಸಲು ಹೋಗಲಿಲ್ಲ. ಮರೀನಾದಲ್ಲಿ ಕರುಣಾನಿಧಿ ಸಮಾಧಿಯಾಗಿದ್ದರೆ ಅದು ನಮ್ಮ ದಯೆಯಿಂದಲ್" ಅವರು ಹೇಳಿದರು.
ತಮಿಳುನಾಡಿನ  ರಾಜಕೀಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಈ ವರ್ಷ ಆಗಸ್ಟ್ ನಲ್ಲಿ ತಮ್ಮ 94 ನೇ ವಯಸ್ಸಿನಲ್ಲಿ ವಿಧಿವಶರಾದರು.
ಡಿಎಂಕೆ ಆಕ್ರೋಶ
ಸಚಿವರ ಹೇಳಿಕೆಗೆ ಡಿಎಂಕೆ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ಮಹಾನ್ ನಾಯಕರೊಬ್ಬರ ಅನುಪಸ್ಥಿತಿಯಲ್ಲಿ ಅವರ ಕುರಿತು ಹೇಳಿಕೆ ನೀಡುವಾಗ ಜಾಗೃತಿ ವಹಿಸುವುದು ಅಗತ್ಯ, "ಹೈಕೋರ್ಟ್ ಮಧ್ಯಪ್ರವೇಶದಿಂದ ಮರೀನಾ ಬೀಚ್ ನಲ್ಲಿ ಕರುಣಾನಿಧಿ ಸಮಾಧಿ ಆಗಿದ್ದು ಇಂತಹಾ ಕೀಳು ಮಟ್ಟದ ಹೇಳಿಕೆ ನಿಡಿದ ಯಾವ ವ್ಯಕ್ತಿಯನ್ನೂ ಇತಿಹಾಸವು ಕ್ಷಮಿಸುವುದಿಲ್ಲ" ಡಿಎಂಕೆ ಶಾಸಕ ಜೆ. ಅನ್ವಳಗಂ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT