ಅಕ್ರಮ ಗಣಿಗಾರಿಕೆ; ಎಂ.ಕೆ. ಅಳಗಿರಿ ಪುತ್ರನ 40 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು 
ದೇಶ

ಅಕ್ರಮ ಗಣಿಗಾರಿಕೆ; ಎಂ.ಕೆ. ಅಳಗಿರಿ ಪುತ್ರನ 40 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಅಕ್ರಮ ಗ್ರಾನೈಟ್ ಗಣಿಗಾರಿಕೆ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಮಾಜಿ ಕೇಂದ್ರ ಸಚಿವ ಎಂ.ಕೆ. ಅಳಗಿರಿ ಪುತ್ರ ದಯಾನಿಧಿ ಅಳಗಿರಿಗೆ 40.34 ಕೋಟಿ ರೂ ಮೌಲ್ಯದ 25 ಸ್ಥಿರ-ಚರಾಸ್ತಿಗಳನ್ನು ಜಾರಿ

ನವದೆಹಲಿ: ಅಕ್ರಮ ಗ್ರಾನೈಟ್  ಗಣಿಗಾರಿಕೆ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಮಾಜಿ ಕೇಂದ್ರ ಸಚಿವ ಎಂ.ಕೆ. ಅಳಗಿರಿ ಪುತ್ರ ದಯಾನಿಧಿ ಅಳಗಿರಿಗೆ 40.34 ಕೋಟಿ ರೂ ಮೌಲ್ಯದ 25 ಸ್ಥಿರ-ಚರಾಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲುಹಾಕಿಕೊಂಡಿದೆ. 
ಅಳಗಿರಿ ದಯಾನಿಧಿ ಹಾಗೂ  ಎಸ್. ನಾಗರಾಜನ್  ಒಲಿಂಪಸ್ ಗ್ರಾನೈಟ್ಸ್ ಕಂಪನಿಯ ಪ್ರವರ್ತಕರು, ಶೇರುದಾರರು ಹಾಗೂ ನಿರ್ದೇಶಕರಾಗಿದ್ದಾರೆ ಮಧುರೈ ಒಲಿಂಪಸ್ ಕಂಪನಿ ಹಾಗೂ ಅದರ ಪ್ರವರ್ತಕರು ಹಾಗೂ ಇತರ ವ್ಯಕ್ತಿಗಳ  ವಿರುದ್ಧ  ತಮಿಳುನಾಡು ಪೊಲೀಸರು ದೂರು ದಾಖಲಿಸಿ, ದೋಷಾರೋಪಪಟ್ಟಿ ಸಲ್ಲಿಸಿದ ನಂತರ  ಜಾರಿ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ.
ಕಂಪನಿ ಹಾಗೂ ಇತರ ವ್ಯಕ್ತಿಗಳು   ಅಕ್ರಮ ಗ್ರಾನೈಟ್ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ  ಎಂದು ಭಾರತೀಯ ದಂಡ ಸಂಹಿತೆ  ವಿವಿಧ ಕಲಂ ಹಾಗೂ  ಸ್ಪೋಟಕ ವಸ್ತುಗಳ ಕಾಯ್ದೆ ಅಡಿ ವಿವಿಧ ಅಪರಾಧ ಎಸಗಲಾಗಿದೆ ಎಂದು  ದೂರಲಾಗಿದೆ.
ತಮಿಳುನಾಡು ಖನಿಜ ನಿಗಮಕ್ಕೆ ಗುತ್ತಿಗೆ ನೀಡಿರುವ ಸುತ್ತಮುತ್ತಲ ಪ್ರದೇಶಗಳಲ್ಲಿ  ಅಕ್ರಮವಾಗಿ ಗಣಿಗಾರಿಕೆ ನಡೆಸಿ, ಸರ್ಕಾರ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು  ಕಂಪನಿಯ ನಿರ್ದೇಶಕರು, ಪ್ರವರ್ತಕರ ವಿರುದ್ದ  ಅಪರಾಧಿಕ ಸಂಚು ಆರೋಪ ಹೊರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

SCROLL FOR NEXT