ಸಂಗ್ರಹ ಚಿತ್ರ 
ದೇಶ

ಕಾಡಿನಲ್ಲಲ್ಲ, ಜೈಶ್ ಸಂಘಟನೆಯ 5 ಬಿಡಾರಗಳ ಮೇಲೆ ಮಿರಾಜ್-2000 ನಿಖರ ದಾಳಿ: ಐಎಎಫ್ ವರದಿ

ಬಾಲಾಕೋಟ್ ನ ಯಾವುದೊ ಕಾಡಿನ ಮಧ್ಯೆ ಭಾರತೀಯ ವಾಯುಸೇನೆ ಬಾಂಬ್ ದಾಳಿ ನಡೆಸಿದೆ ಎಂಬ ಹೇಳಿಕೆಗಳು ರಾಜಕೀಯ ನಾಯಕರ ಬಾಯಿಂದ ಬರುತ್ತಿದೆ.

ನವದೆಹಲಿ: ಬಾಲಾಕೋಟ್ ನ ಯಾವುದೊ ಕಾಡಿನ ಮಧ್ಯೆ ಭಾರತೀಯ ವಾಯುಸೇನೆ ಬಾಂಬ್ ದಾಳಿ ನಡೆಸಿದೆ ಎಂಬ ಹೇಳಿಕೆಗಳು ರಾಜಕೀಯ ನಾಯಕರ ಬಾಯಿಂದ ಬರುತ್ತಿದೆ. ಆದರೆ ಭಾರತೀಯ ವಾಯುಸೇನೆ ಮಾತ್ರ ನಮ್ಮ ಮಿರಾಜ್ 2000 ಯುದ್ಧ ವಿಮಾನ ಜೈಶ್ ಉಗ್ರ ಸಂಘಟನೆಯ 6 ಟಾರ್ಗೆಟ್ ಪೈಕಿ 5 ಟಾರ್ಗೆಟ್ ಗಳಲ್ಲಿ ನಿಖರ ದಾಳಿ ನಡೆಸಿ ಯಶಸ್ವಿಯಾಗಿದೆ ಎಂದು ಐಎಎಫ್ ಹೇಳಿದೆ. 
ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಫೆಬ್ರವರಿ 26ರಂದು ಭಾರತೀಯ ವಾಯುಸೇನೆಯ ಮಿರಾಜ್ 2000 ವಿಮಾನಗಳು ಪಾಕಿಸ್ತಾನಕ್ಕೆ ನುಗ್ಗಿ ಬಾಲಾಕೋಟ್ ನಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿತ್ತು. ಈ ವೇಳೆ 6 ಟಾರ್ಗೆಟ್ ಪೈಕಿ 5 ಟಾರ್ಗೆಟ್ ಗಳನ್ನು ಮಿರಾಜ್ ಯಶಸ್ವಿಯಾಗಿ ಮುಗಿಸಿದೆ ಎಂದು ಐಎಎಫ್ ವರದಿಯಲ್ಲಿ ತಿಳಿಸಿದೆ.
ಇನ್ನು ಫೆಬ್ರವರಿ 27ರಂದು ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಭಾರತದ ಗಡಿ ದಾಟಿ ಒಳ ಬಂದಿದ್ದು ಇದನ್ನು ಮಿರಾಜ್ ಯುದ್ಧ ವಿಮಾನಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದವು. ಇದು ಆಗಸದಲ್ಲಿ ನಮ್ಮ ಸೇನೆಯ ಪರಾಕ್ರಮದ ಸಾಧನೆಗಳು ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT