ದೇಶ

ಶ್ರೀಲಂಕಾ ಸ್ಫೋಟಕ್ಕೆ ಜಾಕಿರ್ ನಾಯಕ್ ನಂಟು: ಎನ್ಐಎ ತನಿಖೆಯಲ್ಲಿ ಬಹಿರಂಗ

Srinivas Rao BV
ನವದೆಹಲಿ: ಶ್ರೀಲಂಕಾ ಸ್ಫೋಟಕ್ಕೂ, ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ಗೂ ನಂಟಿರುವುದು ಎನ್ಐಎ ತನಿಖೆಯಿಂದ ಬಹಿರಂಗಗೊಂಡಿದೆ. 
ಎನ್ಐಎ ತಂಡ ಕೇರಳದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಬೆಂಬಲಿಗ ರಿಯಾಸ್ ಅಬೂಬಕರ್ ನ್ನು ಬಂಧಿಸಿದೆ. ಶ್ರೀಲಂಕಾದಲ್ಲಿ ಈಸ್ಟರ್ ಭಾನುವಾರದಂದು ಸ್ಫೋಟ ನಡೆಸಿದ್ದ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಝಹ್ರಾನ್‌ ಹಶೀಮ್‌ ಎಂಬ ಉಗ್ರನ ಭಾಷಣ ಹಾಗೂ ವಿಡಿಯೋಗಳನ್ನು ರಿಯಾಸ್ ಅಬೂಬಕರ್ ಒಂದು ವರ್ಷದಿಂದ ಕೇಳುತ್ತಿದ್ದ. 
ಎನ್ಐಎ ನೀಡಿರುವ ಮಾಹಿತಿಯ ಪ್ರಕಾರ ರಿಯಾಸ್ ಅಬೂಬಕರ್, ತಾನು ಝಾಕಿರ್ ನಾಯಕ್ ಅವರ ಭಾಷಣಗಳನ್ನೂ ಕೇಳಿ ಪ್ರಭಾವಿತಗೊಂಡು, ಕೇರಳದಲ್ಲಿ ಆತ್ಮಾಹತ್ಯಾ ಬಾಂಬ್ ಸ್ಫೋಟ ನಡೆಸಲು ಯೋಜನೆ ರೂಪಿಸಿದ್ದಾಗಿ ಹೇಳಿದ್ದಾನೆ. 
SCROLL FOR NEXT