ಹಸಿರು ರಾಯಬಾರಿ ಬಾಲಕಿ 
ದೇಶ

ಕಡಿದ ಮರಗಳನ್ನು ನೋಡಿ ಕಣ್ಣೀರಿಟ್ಟ 9 ವರ್ಷದ ಬಾಲಕಿ ಮಣಿಪುರದ ಹಸಿರು ರಾಯಬಾರಿ!

ಮಣಿಪುರ ಸರ್ಕಾರದ ಹಸಿರು ಅಭಿಯಾನಕ್ಕೆ 9 ವರ್ಷದ ಪುಟ್ಟ ಬಾಲಕಿಯನ್ನು ಹೊಸ ರಾಯಬಾರಿಯನ್ನಾಗಿ ನೇಮಿಸಲಾಗಿದೆ.

ಗುವಾಹಟಿ:  ಮಣಿಪುರ ಸರ್ಕಾರದ ಹಸಿರು ಅಭಿಯಾನಕ್ಕೆ 9 ವರ್ಷದ ಪುಟ್ಟ ಬಾಲಕಿಯನ್ನು ಹೊಸ ರಾಯಬಾರಿಯನ್ನಾಗಿ ನೇಮಿಸಲಾಗಿದೆ. 
ಕಾಚಿಂಗ್ ಜಿಲ್ಲೆಯ ಎಲಂಗ್ಬಮ್ ವ್ಯಾಲೆಂಟಿನಾ ದೇವಿ  ತನ್ನ ಮನೆ ಬಳಿ ಇದ್ದ ಮರಗಳನ್ನು ರಸ್ತೆ ಅಭಿವೃದ್ದಿಗಾಗಿ ಕಡಿದಿರುವುದನ್ನು ಕಂಡು ಮಮ್ಮಲ ಮರಗಿ ತೀವ್ರವಾಗಿ ಅತ್ತಿದ್ದಾಳೆ.ಈ ವಿಡಿಯೋ ವೀಕ್ಷಿಸಿದ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್, ಹಸಿರು ಅಭಿಯಾನದ ರಾಯಬಾರಿಯನ್ನಾಗಿ ನೇಮಿಸಿದ್ದಾರೆ.
ಎರಡು ಮರಗಳನ್ನು ಕಡಿದಿರುವುದರಿಂದ  5 ನೇ ತರಗತಿಯಲ್ಲಿ  ವ್ಯಾಸಂಗ ಮಾಡುತ್ತಿರುವ ಈ ಬಾಲಕಿ ದು:ಖಿತಗೊಂಡಿದ್ದಾಳೆ. ಆದಾಗ್ಯೂ, ಸರ್ಕಾರ  ಹಸಿರು ವನ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಹೇಳಿದ ನಂತರ ಇದೀಗ ಸ್ವಲ್ಪ ಭರವಸೆ ಹೊಂದಿದ್ದಾಳೆ ಎಂದು ಸ್ಥಳೀಯರು ಹೇಳಿದ್ದಾರೆ. 
ಎರಡು ಮರಗಳನ್ನು ಕಡಿದಿದ್ದರಿಂದ ಆಕೆ ಆಳುತ್ತಿದ್ದ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ವೀಕ್ಷಿಸಿದ್ದಾಗಿ ಮುಖ್ಯಮಂತ್ರಿ ಬಿರೇನ್ ಸಿಂಗ್ ದೆಹಲಿಯಲ್ಲಿಂದು ಹೇಳಿದ್ದಾರೆ.
ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಆಕೆ ಎರಡು ಗುಲ್ಮೋಹರ್ ಸಸಿಗಳನ್ನು ನೆಟ್ಟಿದ್ದಳು. ಆ ಮರಗಳು ದೊಡ್ಡದಾಗಿದ್ದವು. ಶನಿವಾರ ಆಕೆ ಶಾಲೆ ಮುಗಿಸಿ ಮನೆಗೆ ವಾಪಸ್ ಬಂದಾಗ ಆ ಮರಗಳು ನೆಲಕ್ಕುರುಳಿ ಬಿದಿದ್ದನ್ನು ಕಂಡು ತೀವ್ರವಾಗಿ ರೋದಿಸಿದ್ದಳು ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ವಿಡಿಯೋ ವೀಕ್ಷಿಸಿದ ನಂತರ ಆಕೆಯ ಮನೆಗೆ ಹೋಗಿ ಕೆಲ  ಸಸಿಗಳನ್ನು ನೀಡಿ ಸಮಾಧಾನಪಡಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ. ಪೊಲೀಸ್ ಸಿಬ್ಬಂದಿಗಳೊಂದಿಗೆ ಎಸ್ ಪಿ ಆ ಬಾಲಕಿಯ ಮನೆಗೆ ಹೋಗಿ ಸಮಾಧಾನಪಡಿಸಿದ್ದಾರೆ. 
ಜುಲೈ 18 ರಂದು ಮುಖ್ಯಮಂತ್ರಿ ಹಸಿರು ಮಣಿಪುರ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಈ ಬಾಲಕಿಯನ್ನು ಹಸಿರು ರಾಯಬಾರಿಯನ್ನಾಗಿ ಮಾಡಬೇಕೆಂಬುದು ಕೂಡಲೇ ನನ್ನ ಗಮನಕ್ಕೆ ಬಂತು ಎಂಬುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಮಣಿಪುರಕ್ಕೆ ವಾಪಸ್ ಆದ ನಂತರ ಆ ಬಾಲಕಿಯನ್ನು ಭೇಟಿ ಮಾಡುವುದಾಗಿ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

SCROLL FOR NEXT