ದೇಶ

ಅಸಹಿಷ್ಣುತೆ, ಕೋಮು ಧ್ರುವೀಕರಣದಿಂದ ದೇಶದ ಸಂಘಟನೆಗೆ ಧಕ್ಕೆ: ಡಾ.ಮನಮೋಹನ್ ಸಿಂಗ್ 

Sumana Upadhyaya

ನವದೆಹಲಿ: ಸಮಾಜದಲ್ಲಿ ಕಂಡುಬರುತ್ತಿರುವ ಅಹಿತಕರ ಬೆಳವಣಿಗೆಗಳಾದ ಅಸಹಿಷ್ಣುತೆ, ಕೋಮು ಧ್ರುವೀಕರಣ ಮತ್ತು ಕೆಲವು ಗುಂಪು ಘರ್ಷಣೆಯಿಂದ ಪ್ರಚೋದಿಸಲ್ಪಡುವ ಹಿಂಸಾತ್ಮಕ ಅಪರಾಧಗಳ ಘಟನೆಗಳು ನಮ್ಮ ಪ್ರಜಾಸತ್ತಾತ್ಮಕ ಸಂಘಟಿತ ರಾಷ್ಟ್ರಗಳಿಗೆ ಹಾನಿಯನ್ನುಂಟುಮಾಡುತ್ತವೆ ಎಂದು ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.


ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 75ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ದೆಹಲಿಯಲ್ಲಿ ಸದ್ಭಾವನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ನಾವು ಪಾಲಿಸಲೇಬೇಕಾದ ಕರ್ತವ್ಯಗಳಿಗೆ ಇಂತಹ ಪ್ರವೃತ್ತಿಗಳು ಸಮಾಜದಲ್ಲಿ ಶಾಂತಿಯ ಉನ್ನತಿ, ರಾಷ್ಟ್ರೀಯ ಏಕತೆ ಮತ್ತು ಕೋಮು ಸೌಹಾರ್ದತೆಗಳಿಗೆ ಧಕ್ಕೆಯನ್ನುಂಟುಮಾಡುತ್ತವೆ ಎಂದರು.


ಇಂತಹ ಪ್ರವೃತ್ತಿಗಳನ್ನು ತಡೆಯಲು ನಾವು ಯಾವ ರೀತಿ ಕೊಡುಗೆ ನೀಡಬಹುದು ಎಂದು ನಾವೆಲ್ಲರೂ ಯೋಚಿಸಬೇಕಾಗಿದೆ. ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲಾ ಸಾಗಬೇಕಾಗಿದೆ ಎಂದರು.

SCROLL FOR NEXT