ಸಂಜಯ್ ದತ್ 
ದೇಶ

ದಶಕದ ಬಳಿಕ ಸಂಜಯ್ ದತ್ ಮತ್ತೆ ರಾಜಕೀಯಕ್ಕೆ: ಆರ್‌ಎಸ್‌ಪಿ ತೆಕ್ಕೆಗೆ ಬಾಲಿವುಡ್ ನಟ?

ಹತ್ತು ವರ್ಷಗಳ ಹಿಂದೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾ ಚೊಚ್ಚಲ ರಾಜಕೀಯ ಪ್ರವೇಶಕ್ಕೆ ಯತ್ನಿಸಿದ್ದ ಬಾಲಿವುಡ್ ನಟ ಸಂಜಯ್ ದತ್ ಉತ್ತರ ಪ್ರದೇಶದಿಂದ ಸ್ಪರ್ಧಿಸಲು ಮುಂದಾಗಿ ಕಾನೂನು ಅಡಚಣೆ ಕಾರಣ ಹಿಂದೆ ಸರಿದಿದ್ದರು.ಈಗ ಮತ್ತೆ ರಾಜಕೀಯ ಪ್ರವೇಶಕ್ಕೆ ಸಿದ್ದವಾಗಿದ್ದಾರೆ.

ಮುಂಬೈ: ಹತ್ತು ವರ್ಷಗಳ ಹಿಂದೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾ ಚೊಚ್ಚಲ ರಾಜಕೀಯ ಪ್ರವೇಶಕ್ಕೆ ಯತ್ನಿಸಿದ್ದ ಬಾಲಿವುಡ್ ನಟ ಸಂಜಯ್ ದತ್ ಉತ್ತರ ಪ್ರದೇಶದಿಂದ ಸ್ಪರ್ಧಿಸಲು ಮುಂದಾಗಿ ಕಾನೂನು ಅಡಚಣೆ ಕಾರಣ ಹಿಂದೆ ಸರಿದಿದ್ದರು.ಈಗ ಮತ್ತೆ ರಾಜಕೀಯ ಪ್ರವೇಶಕ್ಕೆ ಸಿದ್ದವಾಗಿದ್ದಾರೆ.

60 ರ ಹರೆಯದ ದತ್ ಸೆಪ್ಟೆಂಬರ್ 25 ರಂದು ರಾಷ್ಟ್ರೀಯ ಸಮಾಜ ಪಕ್ಷಕ್ಕೆ ಸೇರಲು ಸಜ್ಜಾಗಿದ್ದಾರೆ ಎಂದು ಮಹಾರಾಷ್ಟ್ರದ ಸಚಿವರು, ಪಕ್ಷದ ಸಂಸ್ಥಾಪಕ ಮತ್ತು ಕ್ಯಾಬಿನೆಟ್ ಸಚಿವ ಮಹಾದೇವ್ ಜಂಕರ್ ಮುಂಬೈನಲ್ಲಿ ಹೇಳಿದ್ದಾರೆ.ಆರ್‌ಎಸ್‌ಪಿ ಮಹಾರಾಷ್ಟ್ರದ ಆಡಳಿತಾರೂಢ ಬಿಜೆಪಿಯ ಮಿತ್ರಪಕ್ಷವಾಗಿದೆ.

ಮುಖ್ಯವಾಗಿ 'ಧಂಗರ್' ಅಥವಾ ಕುರುಬ ಸಮುದಾಯವನ್ನು ಪ್ರತಿನಿಧಿಸುವ ತಮ್ಮ ಪಕ್ಷವನ್ನು ವಿಸ್ತರಿಸಲು ಆರ್‌ಎಸ್‌ಪಿ ಚಿತ್ರೋದ್ಯಮದ ಗಣ್ಯರತ್ತ ಕಣ್ಣು ನೆಟ್ಟಿದೆ ಎಂದು ಜಂಕರ್ ಹೇಳಿದರು."... ನಮ್ಮ ಪಕ್ಷವನ್ನು ವಿಸ್ತರಿಸಲು ನಾವು ಚಲನಚಿತ್ರ ಕ್ಷೇತ್ರದವರತ್ತ ನೋಡುತ್ತಿದ್ದೇವೆ.  ಇದರ ಭಾಗವಾಗಿ ನಟ ಸಂಜಯ್ ದತ್ ಸೆಪ್ಟೆಂಬರ್ 25 ರಂದು ರಾಷ್ಟ್ರೀಯ ಸಮಾಜ ಪಕ್ಷಕ್ಕೆ ಸೇರುತ್ತಿದ್ದಾರೆ" ಎಂದು ಪಶುಸಂಗೋಪನೆ ಮತ್ತು ಡೈರಿ ಅಭಿವೃದ್ಧಿ ಖಾತೆ ಸಚಿವರು ಹೇಳಿದ್ದಾರೆ.

ಭಾನುವಾರ ಪಕ್ಷದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಅದೇ ವೇಳೆ ದತ್ ಅವರ ವೀಡಿಯೋ ತುಣುಕೊಂದನ್ನು ಸಹ ಅವರು ಪ್ರಸ್ತುತಪಡಿಸಿದ್ದಾರೆ. ಅದರಲ್ಲಿ ನಟ ಆರ್‌ಎಸ್‌ಪಿ ಪಕ್ಷವನ್ನು ಹೊಗಳಿದ್ದಾರೆ ಹಾಗೂ ಜಂಕರ್ ಅವರನ್ನು ತಮ್ಮ "ಸಹೋದರ" ಎಂದು ಸಂಬೋಧಿಸಿದ್ದಾರೆ.

2014 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ಆರ್‌ಎಸ್‌ಪಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗವಾಗಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್-ಅಮೆರಿಕವನ್ನ ಕ್ಷಮಿಸೋ ಮಾತೇ ಇಲ್ಲ.. ಆದರೆ...': ನೆರೆಹೊರೆ ರಾಷ್ಟ್ರಗಳ ಕ್ಷಮೆ ಕೋರಿದ Iran

'ಅದು ಮಾನವೀಯ ಕೆಲಸ.. ನಾವು ಸರಿಯಾದ್ದನ್ನೇ ಮಾಡಿದ್ದೆವು': Iran ನೌಕೆಗೆ ಪ್ರವೇಶ ನೀಡಿದ ಕುರಿತು EAM Jaishankar ಹೇಳಿಕೆ!

T20 ವಿಶ್ವಕಪ್ 2026: 'ಅವ್ರನ್ನ ಸೋಲಿಸೋಕೆ ಚಾನ್ಸೇ ಇಲ್ಲ.. ಚೋಕರ್ಸ್ ಪಟ್ಟ ಕೊಟ್ಟು ಬಿಡ್ತೀವಿ..': ಇವ್ರೇ ವಿನ್ನರ್ ಎಂದ Dale Steyn!

ಬಂಗಾಳದ ನೂತನ ರಾಜ್ಯಪಾಲ ಆರ್.ಎನ್.ರವಿ 'ಬಿಜೆಪಿ ಕೇಡರ್, ಆದ್ರೆ ಇದು ಕಠಿಣ ಅಖಾಡ': ಮಮತಾ

ಇರಾನ್ ಯುದ್ಧದ ನಡುವೆಯೇ ಸೌದಿ ರಕ್ಷಣಾ ಸಚಿವರನ್ನು ಭೇಟಿಯಾದ ಪಾಕ್ CDF ಮುನೀರ್! ಕಾರಣವೇನು?

SCROLL FOR NEXT