ದೇಶ

ಜಮ್ಮು ಕಾಶ್ಮೀರ: ಕುಪ್ವಾರಾದಲ್ಲಿ ಭೀಕರ ಹಿಮಪಾತ, ಓರ್ವ ಯೋಧ ಸಾವು, ಮೂವರು ನಾಪತ್ತೆ

Raghavendra Adiga

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತಂಗ್ಧರ್ ಪ್ರದೇಶದಲ್ಲಿ ಹಿಮಪಾತವಾಗಿದ್ದು  ಸೇನೆಯ ಪೋಸ್ಟ್ ನಲ್ಲಿದ್ದ ಓರ್ವ ಯೋಧ ಸಾವನ್ನಪ್ಪಿದ್ದರೆ ಮೂವರು ನಾಪತ್ತೆಯಾಗಿದ್ದಾರೆ ಎಂದು ಸೇನಾಮೂಲಗಳು ಹೇಳಿದೆ.

ಘಟನೆ ಬಳಿಕ ಕಾಣೆಯಾದ ಯೋಧರನ್ನು ಹುಡುಕಲು ಸೇನೆಯು ಶೋಧ ಮತ್ತು ಪಾರುಗಾಣಿಕಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.. ಈ ವೇಳೆ ಓರ್ವ ಸಿಬ್ಬಂದಿಯನು ಯಶಸ್ವಿಯಾಗಿ ರಕ್ಷಿಸಿದೆ.

ಇತ್ತೀಚಿನ ಮಾಹಿತಿಯ ಪ್ರಕಾರ, ಕುಪ್ವಾರಾದಲ್ಲಿ ಹಿಮದ ಕೆಳಗೆ ಸಿಕ್ಕಿಬಿದ್ದ ಕಾಣೆಯಾದ ಸೇನಾ ಯೋಧರ ಪತ್ತೆಗಾಗಿ ಪಾರುಗಾಣಿಕಾ ತಂಡ ಪ್ರಯತ್ನಿಸುತ್ತಿದೆ, ಆದಾಗ್ಯೂ, ಕಠಿಣ ಹವಾಮಾನ ಪರಿಸ್ಥಿತಿಗಳು ರಕ್ಷಣಾ ಕಾರ್ಯಾಚರಣೆಯನ್ನು ಕಷ್ಟಕರವಾಗಿಸಿದೆ.

ಈ ಮೊದಲು ನವೆಂಬರ್ 18 ರಂದು ಸಿಯಾಚಿನ್ ಹಿಮನದಿಯಲ್ಲಿ ಸುಮಾರು 18,000 ಅಡಿ ಎತ್ತರದಲ್ಲಿ ನಡೆದ ಘಟನೆಯಲ್ಲಿ, ನಾಲ್ಕು ಭಾರತೀಯ ಸೈನಿಕರು ಸಾವನ್ನಪ್ಪಿದ್ದರೆ, ಹಲವಾರು ಮಂದಿ ಗಾಯಗೊಂಡಿದ್ದರು. 

SCROLL FOR NEXT