ದೇಶ

ಹೈದರಾಬಾದ್ ಎನ್ಕೌಂಟರ್: ತೆಲಂಗಾಣ ಸಿಎಂ ಕೆಸಿಆರ್, ಪೊಲೀಸರ ಬಗ್ಗೆ ಆಂಧ್ರ ಸಿಎಂ ಜಗನ್ ರೆಡ್ಡಿ ಹೇಳಿದ್ದು ಇಷ್ಟು...

Srinivas Rao BV

ಅಮರಾವತಿ: ಹೈದರಾಬಾದ್ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಸಿಎಂ ಜಗನ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. 

ಪಶುವೈದ್ಯೆಯ ಅತ್ಯಾಚಾರಿಗಳ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ಮಾತನಾಡಿರುವ ಜಗನ್ ರೆಡ್ಡಿ, ಹೈದರಾಬಾದ್ ಪೊಲೀಸರ ನಡೆಯನ್ನು ಹೊಗಳಿದ್ದಾರೆ. 

ಆಂಧ್ರಪ್ರದೇಶದ ವಿಧಾನಸಭೆಯಲ್ಲಿ ಮಾತನಾಡಿರುವ ಜಗನ್ ರೆಡ್ದಿ, ತೆಲಂಗಾಣ ಸಿಎಂ ಕೆಸಿಆರ್ ಹಾಗೂ ಅಲ್ಲಿನ ಪೊಲೀಸ್ ಅಧಿಕಾರಿಗಳಿಗೆ ಹ್ಯಾಟ್ಸ್ ಆಫ್ ಎಂದು ಹೇಳಿದ್ದಾರೆ. 

ಟಿವಿ ಹಾಗೂ ನ್ಯೂಸ್ ಪೇಪರ್ ಗಳಲ್ಲಿ ಇಡಿಯ ಪ್ರಕರಣವನ್ನು ನೋಡಿದ್ದೆ. ದಿಶಾ ಪೋಷಕರ ನೋವನ್ನು ಅರ್ಥಮಾಡಿಕೊಳ್ಳಬಲ್ಲೆ. ನಾನೂ ಸಹ ಇಬ್ಬರು ಹೆಣ್ಣುಮಕ್ಕಳ ತಂದೆ, ಓರ್ವ ಸಹೋದರಿ ಇದ್ದಾಳೆ. ಓರ್ವ ತಂದೆಯಾಗಿ ಈ ಹೇಯ ಕೃತ್ಯಕ್ಕೆ ಸಂಬಂಧಿಸಿದಂತೆ ಹೇಗೆ ನಿಯಮಗಳ ಬಗ್ಗೆ ಮಾತನಾಡಲಿ ಎಂದು ಜಗನ್ ರೆಡ್ಡಿ ಹೇಳಿದ್ದಾರೆ. 
 

SCROLL FOR NEXT