ದೇಶ

ದೆಹಲಿಯ ಸೀಲಾಂಪುರದಲ್ಲಿ ಸಿಎಎ ಪ್ರತಿಟನೆ, ಹಿಂಸಾಚಾರ: ಆರು ಮಂದಿ ಬಂಧನ, ನಿಷೇಧಾಜ್ಞೆ ಜಾರಿ 

Sumana Upadhyaya

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ತೀವ್ರವಾಗಿ ಈಶಾನ್ಯ ಭಾಗದ ಸೀಲಾಂಪುರ್ ಗೆ ವ್ಯಾಪಿಸಿ ಅಲ್ಲಿ ಪ್ರತಿಭಟನೆ ತೀವ್ರವಾಗಿ ಹಿಂಸಾರೂಪಕ್ಕೆ ತಿರುಗಿದ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಎರಡು ಎಫ್ಐಆರ್ ಗಳನ್ನು ದಾಖಲಿಸಲಾಗಿದ್ದು ಇಂದು ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.


ಇಂದು ಅಧಿಕಾರಿಗಳು ಈಶಾನ್ಯ ದೆಹಲಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು ಸೆಕ್ಷನ್ 144 ಜಾರಿಗೆ ತರಲಾಗಿದೆ. ಈ ಆದೇಶದ ಪ್ರಕಾರ ಒಂದು ಜಾಗದಲ್ಲಿ ನಾಲ್ವರಿಗಿಂತ ಹೆಚ್ಚು ಜನರು ಗುಂಪುಗೂಡಿ ನಿಂತು ಚರ್ಚೆ ಮಾಡುವಂತಿಲ್ಲ.

SCROLL FOR NEXT