ಸಂಗ್ರಹ ಚಿತ್ರ 
ದೇಶ

ಬಿಜೆಪಿ ಆಳ್ವಿಕೆಯ ರಾಜ್ಯಗಳ ಸಂಖ್ಯೆ ಇಳಿಕೆ: ಒಂದೇ ವರ್ಷದಲ್ಲಿ 5 ರಾಜ್ಯಗಳ ಕಳೆದುಕೊಂಡ ಕಮಲ ಪಾಳಯ

ಜಾರ್ಖಾಂಡ್ ವಿಧಾನಸಬೆ ಚುನಾವಣೆಯಲ್ಲಿ ಬಿಜೆಪಿ ಸೋಲುವುದರೊಂದಿಗೆ ಕಳೆದ 1 ವರ್ಷದಲ್ಲಿ 5 ರಾಜ್ಯಗಳು ಬಿಜೆಪಿಯ ಕೈಯಿಂದ ಜಾರಿದಂತಾಗಿದೆ. ಇದರಿಂದಾಗಿ ಈ ಸತತ ಸೋಲುಗಳು ಬಿಜೆಪಿ ಪಾಳಯಕ್ಕೆ ಭವಿಷ್ಯದಲ್ಲಿ ಎಚ್ಚರಿಕೆ ಗಂಟೆಯಾಗಿವೆ ಎಂದೇ ಹೇಳಲಾಗುತ್ತಿದೆ. 

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ, ಮಹಾರಾಷ್ಚ್ರಗಳ ಬಳಿಕ ಜಾರ್ಖಾಂಡ್ ರಾಜ್ಯದಲ್ಲೂ ಸೋಲು ಕಂಡ ಬಿಜೆಪಿ

ನವದೆಹಲಿ: ಜಾರ್ಖಾಂಡ್ ವಿಧಾನಸಬೆ ಚುನಾವಣೆಯಲ್ಲಿ ಬಿಜೆಪಿ ಸೋಲುವುದರೊಂದಿಗೆ ಕಳೆದ 1 ವರ್ಷದಲ್ಲಿ 5 ರಾಜ್ಯಗಳು ಬಿಜೆಪಿಯ ಕೈಯಿಂದ ಜಾರಿದಂತಾಗಿದೆ. ಇದರಿಂದಾಗಿ ಈ ಸತತ ಸೋಲುಗಳು ಬಿಜೆಪಿ ಪಾಳಯಕ್ಕೆ ಭವಿಷ್ಯದಲ್ಲಿ ಎಚ್ಚರಿಕೆ ಗಂಟೆಯಾಗಿವೆ ಎಂದೇ ಹೇಳಲಾಗುತ್ತಿದೆ. 

2018ರ ಅಂತ್ಯದಲ್ಲಿ ನಡೆದ ರಾಜ್ಯಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಡ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿತ್ತು. ನಂತರ ಮಹಾರಾಷ್ಟ್ರದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಮಿತ್ರಪಕ್ಷ ಶಿವಸೇನೆಯ ಜೊತೆಗಿನ ಮುನಿಸಿನ ಕಾರಣ ಅಧಿಕಾರಕ್ಕೆ ಏರಲು ಸಾಧ್ಯವಾಗಲಿಲ್ಲ. 

ಇದೀಗ ಜಾರ್ಖಾಂಡ್ ರಾಜ್ಯದಲ್ಲಿ ಬಿಜೆಪಿ ಸೋಲು ಕಂಡಿದೆ. ಇತ್ತೀಚೆಗೆ ಹರಿಯಾಣದಲ್ಲಿ ಕೂಡ ಬಿಜೆಪಿಗೆ ಬಹುಮತ ಪ್ರಾಪ್ತಿಯಾಗಲು ಸಾಧ್ಯವಾಗಿಲಿಲ್ಲ. ಆದರೆ, ದುಷ್ಯಂತ್ ಚೌಟಾಲಾ ಅವರ ಜನನಾಯಕ ಜನತಾ ಪಕ್ಷದ ಬೆಂಬಲದಿಂದ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಯಿತು. 

ಇಷ್ಟಕ್ಕೂ ಬಿಜೆಪಿಗೆ ಸೋಲಿ ಕಾರಣವಾದ ಅಂಶವಾದರೂ ಏನು? 

  • ಆದಿವಾಸಿ ಜನಾಂಗ ಜಾರ್ಖಾಂಡ್ ನಲ್ಲಿ ಪ್ರಬಲ. ಆದರೆ, ಆದಿವಾಸಿಯಲ್ಲದ ರಘುಬರ ದಾಸ್ ಅವರನ್ನು ಬಿಜೆಪಿ ಮುಖ್ಯಮಂತ್ರಿ ಮಾಡಿದ್ದು. 
  • ಈ ಚುನಾವಣೆಯಲ್ಲಿ ಮೋದಿ ಅವರು ಚುನಾವಣಾ ವಿಷಯವಾಗಿರಲಿಲ್ಲ. ರಾಜ್ಯ ಸರ್ಕಾರದ ಸಾಧನೆಗಳ ಾಧಾರದಲ್ಲಿ ಚುನಾವಣೆ ನಡೆಯಿತು. 
  • ರಾಜ್ಯದ ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರಿಗಳಿಗೆ ಮಣೆ. ಹೀಗಾಗಿ ಇದು ವಿಭಿನ್ನ ಸರ್ಕಾರವಲ್ಲ ಎಂದು ಜನತೆಗೆ ಎನಿಸಿತ್ತು. 
  • ರಘುಬರ ದಾಸ್ ದರ್ಪದ ಮನುಷ್ಯ. ಅಧಿಕಾರ ಅವರ ತಲೆಗೇರಿದ ಎಂದು ಜನರ ಮನಸ್ಸಿನಲ್ಲಿ ಬೇರೂರಿತ್ತು. 
  • ಜಾರ್ಖಾಂಡ್ ರಾಜ್ಯವನ್ನು ಆದಿವಾಸಿ ಮುಕ್ತ ರಾಜ್ಯ ಮಾಡುತ್ತೇನೆಂದು ದಾಸ್ ಒಮ್ಮೆ ಹೇಳಿದ್ದರು. ಬುಡಕಟ್ಟು ಕಾಯ್ದೆ ತಿದ್ದುಪಡಿಗಳ ಆದಿವಾಸಿಗಳ ಆಕ್ರೋಶಕ್ಕೆ ಇದು ಕಾರಣವಾಗಿತ್ತು. 
  • ಮಿತ್ರ ಪಕ್ಷವಾಗಿ ಎಜೆಎಸ್'ಯುವನ್ನು ಕೈಬಿಟ್ಟ ದಾಸ್, ಬಿಜೆಪಿಯ ಇತರ ನಾಯಕರ ಬಗ್ಗೆಯೂ ನಿರ್ಲಕ್ಷ್ಯ. ಏಕಾಂಗಿಯಾಗಿ ಚುನಾವಣೆಗೆ ಹೋಗಿದ್ದರಿಂದ ಬಿಜೆಪಿಗೆ ನಷ್ಟ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT