ದೇಶ

ಕಳೆದ ಹತ್ತು ದಿನದಲ್ಲಿ ಶಬರಿಮಲೆಯಲ್ಲಿ 19 ಅಯ್ಯಪ್ಪ ಭಕ್ತರು ಹೃದಯಾಘಾತದಿಂದ ಸಾವು

Srinivas Rao BV

ಶಬರಿಮಲೆ: ವಿಶ್ವ ವಿಖ್ಯಾತ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ತೆರಳುವ ಮಾರ್ಗದಲ್ಲಿ ಕಡಿದಾದ ಬೆಟ್ಟಗಳನ್ನು ಏರುವಾಗ ಕಳೆದ 10 ದಿನಗಳಲ್ಲಿ ವಿವಿಧ ರಾಜ್ಯಗಳ 19 ಅಯ್ಯಪ್ಪ ಭಕ್ತರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆಗಳು ಈ ಬಾರಿ ಅಯ್ಯಪ್ಪ ಹಂಗಾಮಿನಲ್ಲಿ ನಡೆಸಿದೆ.

ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಬೆಟ್ಟ ಏರುವ ಸಂದರ್ಭದಲ್ಲಿ ಹೃದಯಾಘಾತದಿಂದ 19 ಭಕ್ತರು ಸಾವನ್ನಪ್ಪಿರುವುದು ತೀವ್ರ ವಿಷಾದ ಮೂಡಿಸಿದೆ. ಡಿಸೆಂಬರ್ 15 ರಿಂದ ಈವರೆಗೆ 19 ಅಯ್ಯಪ್ಪ ಭಕ್ತರು  ಸಾವನ್ನಪ್ಪಿರುವುದು ಅವರ ಕುಟುಂಬಗಳಲ್ಲಿ ತೀವ್ರ ನೋವು ಉಂಟುಮಾಡಿದೆ. 

SCROLL FOR NEXT