ಉತ್ತಮ ಆಡಳಿತ ಸೂಚ್ಯಂಕ: ಮೊದಲ ಸ್ಥಾನದಲ್ಲಿ ತಮಿಳುನಾಡು, ಎರಡು-ಮೂರನೇ ಸ್ಥಾನ ಯಾರಿಗೆ? ಇಲ್ಲಿದೆ ವಿವರ 
ದೇಶ

ಉತ್ತಮ ಆಡಳಿತ ಸೂಚ್ಯಂಕ: ಮೊದಲ ಸ್ಥಾನದಲ್ಲಿ ತಮಿಳುನಾಡು, ಎರಡು-ಮೂರನೇ ಸ್ಥಾನ ಯಾರಿಗೆ? ಇಲ್ಲಿದೆ ವಿವರ 

ಉತ್ತಮ ಆಡಳಿತ ಸೂಚ್ಯಂಕದಲ್ಲಿ ತಮಿಳುನಾಡು ಮೊದಲ ಸ್ಥಾನ ಪಡೆದಿದ್ದರೆ, ನಂತರದ ಎರಡು ಸ್ಥಾನಗಳಲ್ಲಿ ಅನುಕ್ರಮವಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳಿವೆ. 

ನವದೆಹಲಿ: ಉತ್ತಮ ಆಡಳಿತ ಸೂಚ್ಯಂಕದಲ್ಲಿ ತಮಿಳುನಾಡು ಮೊದಲ ಸ್ಥಾನ ಪಡೆದಿದ್ದರೆ, ನಂತರದ ಎರಡು ಸ್ಥಾನಗಳಲ್ಲಿ ಅನುಕ್ರಮವಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳಿವೆ. 

ದೊಡ್ಡ ರಾಜ್ಯಗಳು, ಈಶಾನ್ಯ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಹಿಲ್ ಸ್ಟೇಟ್ಸ್ ಗಳನ್ನಾಗಿ ವಿಂಗಡಣೆ  ಮಾಡಲಾಗಿದ್ದು, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ ಮೊದಲ 4 ಸ್ಥಾನಗಳಲ್ಲಿ ಸ್ಥಾನಪಡೆದುಕೊಂಡಿವೆ 

ಚತ್ತೀಸ್ ಗಢ 4 ನೇ ಸ್ಥಾನದಲ್ಲಿದ್ದು, ಆಂಧ್ರಪ್ರದೇಶ-5, ಗುಜರಾತ್-6, ಹರ್ಯಾಣ 7  ಹಾಗೂ ಕೇರಳ 8 ನೇ ಸ್ಥಾನಗಳಲ್ಲಿವೆ ಎಂದು ಸಿಬ್ಬಂದಿ ಸಚಿವಾಲಯ ಮಾಹಿತಿ ನೀಡಿದೆ. 
 
ದೊಡ್ಡ ರಾಜ್ಯಗಳ ವಿಭಾಗದಲ್ಲಿ ಮಧ್ಯಪ್ರದೇಶ 9 ನೇ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಅನುಕ್ರಮವಾಗಿ ಪಶ್ಚಿಮ ಬಂಗಾಳ-10, ತೆಲಂಗಾಣ-11, ರಾಜಸ್ಥಾನ-12, ಪಂಬಾಜ್-13, ಒಡಿಶಾ-14, ಬಿಹಾರ-15, ಗೋವಾ-16, ಉತ್ತರಪ್ರದೇಶ-17, ಜಾರ್ಖಂಡ್ 18 ನೇ ಸ್ಥಾನಗಳಲ್ಲಿದೆ. 

ಈಶಾನ್ಯ ಹಾಗೂ ಹಿಲ್ ಸ್ಟೇಟ್ಸ್ ನ ವಿಭಾಗದಲ್ಲಿ ಅನುಕ್ರಮವಾಗಿ ಹಿಮಾಚಲ ಪ್ರದೇಶ ನಂ.1 ಸ್ಥಾನದಲ್ಲಿದ್ದರೆ, ಉತ್ತರಾಖಂಡ್ 2 ನೇ ಸ್ಥಾನ, ನಂತರದ ಸ್ಥಾನಗಳಲ್ಲಿ ತ್ರಿಪುರ, ಮಿಜೋರಾಮ್, ಸಿಕ್ಕಿಂ, ಅಸ್ಸಾಂ, ಜಮ್ಮು-ಕಾಶ್ಮೀರ (ಜಮ್ಮು-ಕಾಶ್ಮೀರ, ಲಡಾಖ್) ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶಗಳಿವೆ. ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯ ಪೈಕಿ ಮೊದಲ ಸ್ಥಾನದಲ್ಲಿ ಪಾಂಡಿಚೆರಿ, ನಂತರದ ಸ್ಥಾನಗಳಲ್ಲಿ ಚಂಡೀಗಢ, ದೆಹಲಿ, ದಾಮನ್, ಡಿಯು, ಅಂಡಮಾನ್, ನಿಕೋಬಾರ್ ದ್ವೀಪ, ದಾದ್ರಾ, ನಗರ್ ಹವೇಲಿ, ಲಕ್ಷ ದ್ವೀಪಗಳಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT