ಬಂಗಾಳವನ್ನೇ ನಾಶ ಮಾಡಲು ಬಿಜೆಪಿ ಸಜ್ಜು: ಮಮತಾ ಬ್ಯಾನರ್ಜಿಆರೋಪ 
ದೇಶ

ಬಂಗಾಳವನ್ನೇ ನಾಶ ಮಾಡಲು ಬಿಜೆಪಿ ಸಜ್ಜು: ಮಮತಾ ಬ್ಯಾನರ್ಜಿಆರೋಪ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲ್ಕತಾ ಪೋಲಿಸ್ ಕಮಿಷನರ್ ನಿವಾಸದ ಹೊರಗಡೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದು "ಬಿಜೆಪಿ....

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲ್ಕತಾ ಪೋಲಿಸ್ ಕಮಿಷನರ್ ನಿವಾಸದ ಹೊರಗಡೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದು "ಬಿಜೆಪಿ (ಭಾರತೀಯ ಜನತಾ ಪಕ್ಷ) ಬಂಗಾಳವನ್ನು ಹಾಳು ಮಾಡಲು ಹೊರಟಿದೆ. ನಾನು ಬ್ರಿಗೇಡ್ ರ್ಯಾಲಿಗೆ ಅವಕಾಶ ನೀಡಿಲ್ಲ ಎಂಬ ಏಕೈಕ ಕಾರಣಕ್ಕೆ ಅವರು ಬಂಗಾಳವನ್ನೇ ನಾಶ ಮಾಡಲು ಹೊರಟಿದ್ದಾರೆ." ಎಂದರು.
ಪ್ರಧಾನಿ ಮೋದಿಯವರ ನಿನ್ನೆಯ ಭಾಷಣವನ್ನು ನೀವೇಲ್ಲಾ ಕೇಳಿದ್ದೀರಿ. ಅದರಲ್ಲಿ ಅವರು ಹಾಕಿರುವ ಬೆದರಿಕೆಗಳ ಕುರಿತೂ ನಿಮಗೆ ಅರಿವಿದೆ. ಪ್ರಧಾನಿ ಆಡಿರುವ ಭಾಷೆಯ ಕುರಿತಂತೆ ನಾನೇನೂ ಹೇಳುವ ಅಗತ್ಯವಿಲ್ಲ ಎಂದ ಟಿಎಂಸಿ ನಾಯಕಿ ಬಿಜೆಪಿ ಇದಾಗಲೇ ತನ್ನ ಎಕ್ಸ್ಪೈರಿ ದಿನಾಂಕದ ಆಚೆಗೆ ಹೋಗಿದೆ ಎಂದಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಮೋದಿ ಅವರ ಆದೇಶದ ಅನುಸಾರ ಕಾರ್ಯನಿರ್ವಹಿಸಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಆರೋಪಿಸಿದ್ದಾರೆ. ಕೇಂದ್ರೀಯ ತನಿಖಾ ದಳವನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದೂ  ಅವರು ಹೇಳಿದರು.
ನಾವು ಪೋಲೀಸ್ ಬಲಕ್ಕೆ ರಕ್ಷಣೆ ನೀಡಬೇಕಾಗಿರುವುದು ನಮ್ಮ ಜವಾಬ್ದಾರಿ. ನೋಟೀಸ್ ನೀಡದೆ ನೀವು ಕೊಲ್ಕತ್ತಾ ಪೊಲೀಸ್ ಆಯುಕ್ತರ ಮನೆಗೆ ಬರುತ್ತಿದ್ದೀರಿ. ನಾವು ಸಿಬೈಐ ನವರನ್ನು ಬಂಧಿಸಬಹುದು, ಆದರೆ ಇದಿಘ ಬಿಟ್ಟಿದ್ದೇವೆ.
ರಾಜೀವ್ ಕುಮಾರ್ (ಕೊಲ್ಕತ್ತಾ ಪೋಲಿಸ್ ಕಮೀಷನರ್) ಅವರು ವಿಶ್ವದಲ್ಲೇ ಅತ್ಯುತ್ತಮ ಅಧಿಕಾರಿ ಎಂದು ನಾನು ಭಾವಿಸುತ್ತೇನೆ. ನಾನು ಸಿಬಿಐ ಅಧಿಕಾರಿಗಳ ಬಗ್ಗೆ ಗೌರವ ಹೊಂದಿದ್ದೇನೆ. ಆದರೆ ಇಂದು ನಾನು ಬಹಳ ದುಃಖಿತಳಾಗಿದ್ದೇನೆ.ಒದು ಒಕ್ಕೂಟ ವ್ಯವಸ್ಥೆಯ ನಾಶಕ್ಕೆ ಕಾರಣವಾಗಲಿದೆ" ,ಮಮತಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT