ಪಿಣರಾಯ್ ವಿಜಯನ್, ವಿಜಯ್ ಸೇತುಪತಿ 
ದೇಶ

ಶಬರಿಮಲೆ ವಿವಾದ: ಪಿಣರಾಯ್ ವಿಜಯನ್ ನಿಲುವು ಸರಿ- ನಟ ವಿಜಯ್ ಸೇತುಪತಿ

ಶಬರಿಮಲೆ ವಿವಾದಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರ ನಿಲುವನ್ನು ಕಾಲಿವುಡ್ ನಟ ವಿಜಯ್ ಸೇತುಪತಿ ಶ್ಲಾಘಿಸಿದ್ದಾರೆ. ನಾನೂ ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ.

ಚೆನ್ನೈ: ಶಬರಿಮಲೆ ವಿವಾದಕ್ಕೆ ಸಂಬಂಧಿಸಿದಂತೆ  ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರ ನಿಲುವನ್ನು  ಕಾಲಿವುಡ್ ನಟ  ವಿಜಯ್  ಸೇತುಪತಿ ಶ್ಲಾಘಿಸಿದ್ದಾರೆ.  ನಾನೂ ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ.

ಟವಿ ಶೋ ವೊಂದರಲ್ಲಿ ಪಿಣರಾಯ್ ವಿಜಯನ್ ಜೊತೆಗೆ ವೇದಿಕೆ ಹಂಚಿಕೊಂಡಿರುವ ವಿಜಯ್ ಸೇತುಪತಿ,  ಕೇರಳ ಮುಖ್ಯಮಂತ್ರಿ ಯಾವಾಗಲೂ ಶಾಂತ ಸ್ವಭಾವದಿಂದ ಇರುವ ಪ್ರಬುದ್ಧ ವ್ಯಕ್ತಿಯಾಗಿದ್ದಾರೆ. ಹೆಡ್ ಮಾಸ್ಟರ್ ರೀತಿಯಲ್ಲಿ ವೇದಿಕೆಗೆ ಆಗಮಿಸುತ್ತಾರೆ. ಅವರು ನಡೆದು ಹೋಗುವಾಗ ನಿಶಬ್ದ ವಾತವಾರಣವಿರುತ್ತದೆ ಎಂದು ಹೊಗಳಿದ್ದಾರೆ.

ವೇದಿಕೆಯಲ್ಲಿದ್ದಾಗ ನನ್ನ ಕಡೆ ತಿರುಗಿ ಏಕೆ ಮೊದಲು ಮಾತನಾಡಲಿಲ್ಲ ಎಂಬುದನ್ನು ಕೇಳಿ ನಿಜಕ್ಕೂ ಆಶ್ಚರ್ಯವಾಯಿತು. ಶಾಸಕರು ಅಥವಾ ಸಂಸದರು ಈ ರೀತಿಯ ಸಹಕಾರ ನೀಡದಿದ್ದರೂ ಮುಖ್ಯಮಂತ್ರಿ ಅವರ ಮಾತು ನಿಜಕ್ಕೂ ಬೆರಗೂ ಮೂಡಿಸಿತು ಎಂದು  ವಿಜಯ್ ಸೇತುಪತಿ ಹೇಳಿದ್ದಾರೆ.

ತಮಿಳುನಾಡು ಗಾಜಾ ಚಂಡಮಾರುತಕ್ಕೆ ತುತ್ತಾದ ಸಂದರ್ಭದಲ್ಲಿ ಕೇರಳದಲ್ಲಿ ಸಂಕಷ್ಟವಿದ್ದರೂ 10  ಕೋಟಿ ರೂಪಾಯಿ ಪರಿಹಾರ ಹಣ ಒದಗಿಸಿದ್ದಾರೆ. ಇದನ್ನು ಯಾವಾಗಲೂ ಮರೆಯಲು ಸಾಧ್ಯವಿಲ್ಲ ಎಂದು ಹೊಗಳಿದ್ದಾರೆ.

ಋತುಚಕ್ರದ ಕಾರಣ ಮಹಿಳೆಯರನ್ನು "ಅಶುದ್ಧ" ಎಂದು ವರ್ಣಿಸುವ ವಾದವನ್ನು ಸೂಪರ್ ಸ್ಟಾರ್ ಪ್ರಶ್ನಿಸಿದ್ದಾರೆ. ಶಬರಿಮಲೆ ವಿವಾದದಲ್ಲಿ ಕೇರಳ ಮುಖ್ಯಮಂತ್ರಿ ನಿಲುವು ಸರಿಯಾದದ್ದು ಎಂದಿದ್ದಾರೆ.
ಮಹಿಳೆಯರು ಪ್ರತಿ ತಿಂಗಳು ಋತುಚಕ್ರದ ಕಾರಣ ತೊಂದರೆ ಎದುರಿಸುವುದು ಸಾಮಾನ್ಯ. ಅದು ಏಕೆ ಉಂಟಾಗುತ್ತದೆ ಎಂಬುದನ್ನು ಎಲ್ಲರೂ ತಿಳಿದಿದ್ದೇವೆ. ಅದು ಪವಿತ್ರವಾದದ್ದು ಅದರಿಂದಲೇ ನಾವೆಲ್ಲಾ ಭೂಮಿ ಮೇಲೆ ಇದ್ದೇವೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕೆಂದು ವಿಜಯ್ ಸೇತುಪತಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT