70 ಕ್ಕೂ ಹೆಚ್ಚು ಜನರ ಬಲಿ ತೆಗೆದುಕೊಂಡಿದ್ದ ನಕಲಿ ಮದ್ಯ ತಯಾರಿಸಿದ್ದ ತಂದೆ-ಮಗನ ಬಂಧನ! 
ದೇಶ

70 ಕ್ಕೂ ಹೆಚ್ಚು ಜನರ ಬಲಿ ತೆಗೆದುಕೊಂಡಿದ್ದ ನಕಲಿ ಮದ್ಯ ತಯಾರಿಸಿದ್ದ ತಂದೆ-ಮಗನ ಬಂಧನ!

ಉತ್ತರಾಖಂಡ್ ಹಾಗೂ ಉತ್ತರ ಪ್ರದೇಶಗಳಲ್ಲಿ 70 ಜನರ ಸಾವಿಗೆ ಕಾರಣವಾಗಿದ್ದ ನಕಲಿ ಮದ್ಯ ತಯಾರಿಸಿದ್ದ ತಂದೆ-ಮಗನನ್ನು ಹರಿದ್ವಾರದ ಝಬ್ರೇರಾ ಪ್ರದೇಶದಿಂದ ಬಂಧಿಸಲಾಗಿದೆ.

ಲಕ್ನೊ: ಉತ್ತರಾಖಂಡ್ ಹಾಗೂ ಉತ್ತರ ಪ್ರದೇಶಗಳಲ್ಲಿ 70 ಜನರ ಸಾವಿಗೆ ಕಾರಣವಾಗಿದ್ದ ನಕಲಿ ಮದ್ಯ ತಯಾರಿಸಿದ್ದ ತಂದೆ-ಮಗನನ್ನು ಹರಿದ್ವಾರದ ಝಬ್ರೇರಾ ಪ್ರದೇಶದಿಂದ ಬಂಧಿಸಲಾಗಿದೆ
ಉತ್ತರ ಪ್ರದೇಶದ ಶರಣ್ ಪುರ ಜಿಲ್ಲೆಯ ಪುಡೇನ್ ಗ್ರಾಮದವರಾದ ಹರ್ದೇವ್ ಹಾಗೂ ಸುಖ್ವೀಂದರ್ ಎಂಬ ಇಬ್ಬರು ಬಂಧಿತ ವ್ಯಕ್ತಿಗಳಾಗಿದ್ದು, ಉತ್ತರಾಖಂಡ್ ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೊಳಗಾಗಿರುವ ಇಬ್ಬರು ವ್ಯಕ್ತಿಗಳು ತಂದೆ-ಮಗನಾಗಿದ್ದಾರೆ. ನಕಲಿ ಮದ್ಯವನ್ನು ತಾವು ತಯಾರಿಸಿದ್ದಲ್ಲವೆಂದೂ, ಅದನ್ನು ಭಗ್ವಾನ್ ಪುರ ಪ್ರದೇಶದಲ್ಲಿರುವ ಅರ್ಜುನ್ ಎಂಬಾತನಿಂದ ಸುಮಾರು 400 ಲೀಟರ್ ನಷ್ಟು ಮದ್ಯ ತಂದಿದ್ದಾಗಿಯೂ ಪ್ರಾಥಮಿಕ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. 
ಬಂಧಿತರಿಂದ ಪಡೆದ ಮಾಹಿತಿಯನ್ನಾಧರಿಸಿ ಪೊಲೀಸರು ಈಗ ಅರ್ಜುನ್ ಎಂಬಾತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರ ಘಟನೆ ಬಗ್ಗೆ ತನಿಖೆ ನಡೆಸಲು ಎಸ್ ಐಟಿ ರಚನೆ ಮಾಡಿದ್ದು, ಈ ಘಟನೆಗೆ ಸಂಬಂಧಪಟ್ಟಂತೆ ಈ ವರೆಗೂ ನಾಲ್ವರನ್ನು ಬಂಧಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT