ಪುಲ್ವಾಮಾ ದಾಳಿ ನಂತರ ಪಾಕ್ ಪರ ಸಿಧು ಬ್ಯಾಟಿಂಗ್: ಕಪಿಲ್ ಶರ್ಮಾ ಶೋ ನಿಂದ ಸಿಧುಗೆ ಗೇಟ್ ಪಾಸ್! 
ದೇಶ

ಪುಲ್ವಾಮಾ ದಾಳಿ ನಂತರ ವಿವಾದಾಸ್ಪದ ಹೇಳಿಕೆ: ಕಪಿಲ್ ಶರ್ಮಾ ಶೋ ನಿಂದ ಸಿಧುಗೆ ಗೇಟ್ ಪಾಸ್!

ಜಮ್ಮು-ಕಾಶ್ಮೀರದಲ್ಲಿನ ಪುಲ್ವಾಮಾ ದಾಳಿಯ ನಂತರ ಪಾಕಿಸ್ತಾನ ಜತೆ ಮಾತುಕತೆ ನಡೆಸಿ ಎಂದು ಹೇಳಿದ್ದ ಪಂಜಾಬ್ ಸಚಿವ ನವಜೋತ್ ಸಿಧು ಅವರನ್ನು ಜನಪ್ರಿಯ ಟಿವಿ ಶೋ "ಕಪಿಲ್ ಶರ್ಮಾ ಶೋ.....

ಮುಂಬೈ: ಜಮ್ಮು-ಕಾಶ್ಮೀರದಲ್ಲಿನ ಪುಲ್ವಾಮಾ ದಾಳಿಯ ನಂತರ ಪಾಕಿಸ್ತಾನ ಜತೆ ಮಾತುಕತೆ ನಡೆಸಿ ಎಂದು ಹೇಳಿದ್ದ ಪಂಜಾಬ್ ಸಚಿವ  ನವಜೋತ್ ಸಿಧು ಅವರನ್ನು ಜನಪ್ರಿಯ ಟಿವಿ ಶೋ "ಕಪಿಲ್ ಶರ್ಮಾ ಶೋ" ನಿಂದ ಕೈ ಬಿಡಲಾಗಿದೆ.
ಪಾಕಿಸ್ತಾನ ಪರ ಮೃದು ಧೋರಣೆ ತಳೆದಿದ್ದ ಸಿಧು ಅವರನ್ನು ಕಾರ್ಯಕ್ರಮದಿಂದ ಕೈಬಿಡಬೇಕೆಂದು ಸೆನೆಟರ್ ಗಳು ನಡೆಸಿದ್ದ ಆನ್ ಅಲಿನ್ ಅಭಿಯಾನಕ್ಕೆ ಸೋನಿ ಟಿವಿ ಸ್ಪಂದಿಸಿದ್ದು ಸಿಧು ಅವರನ್ನು ಕಾರ್ಯಕ್ರಮದಿಂದ ಕೈಬಿಟ್ಟಿದೆ.
ಪುಲ್ವಾಮಾ ದಾಳಿ ಬಳಿಕ ಮಾತನಾಡಿದ್ದ ಸಿಧು "ಪುಲ್ವಾಮಾ ಉಗ್ರ ದಾಳಿ ಖಂಡನೀಯ, ಆದರೆ ಕಳೆದ ಎಪ್ಪತ್ತೇಳು ವರ್ಷಗಳಿಂದ ಈ ಘಟನೆ ಮರುಕಳಿಸುತ್ತಿದೆ. ಇದಕ್ಕೆಲ್ಲಾ ಪಾಕ್ ಜತೆ ಮಾತುಕತೆಯೊಂದೇ ಪರಿಹಾರ" ಎಂದಿದ್ದರು. ಅಲ್ಲದೆ ಒಂದು ಉಗ್ರ ದಾಳಿಯ ಹಿನ್ನೆಲೆಯಲ್ಲಿ ಇಡೀ ದೇಶವನ್ನು ದ್ವೇಷಿಸುವುದು ಒಳ್ಳೇದಲ್ಲ ಎಂದೂ ಹೇಳಿದ್ದರು.
ಸಿಧು ಅವರ ಈ ಹೇಳಿಕೆಗೆ ಸಾಮಾಜಿಕ ತಾಣದಲ್ಲಿ ನೆಟ್ಟಿಗರಿಂದ ತೀವ್ರ ಖಂಡನೆ ವ್ಯಕ್ತವಾಗಿತ್ತು. ಅಲ್ಲದೆ ದೇಶದಾದ್ಯಂತ ಜನರು ಸಿಧು ಹೇಳಿಕೆ ವಿರುದ್ಧ ಸಿಡಿದೆದ್ದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT