ಮೋದಿ ಜನಪ್ರಿಯ ಹೌದು ಆದರೆ ಉತ್ತರ ಪ್ರದೇಶದಲ್ಲಿ 2014 ರ ಫಲಿತಾಂಶ ಮರುಕಳಿಸದು! 
ದೇಶ

ಮೋದಿ ಜನಪ್ರಿಯ ಹೌದು ಆದರೆ ಉತ್ತರ ಪ್ರದೇಶದಲ್ಲಿ 2014 ರ ಫಲಿತಾಂಶ ಮರುಕಳಿಸದು!

ಪ್ರಧಾನಿ ನರೇಂದ್ರ ಮೋದಿ ಈಗಲೂ ಜನಪ್ರಿಯ ನಾಯಕ ಹೌದು ಆದರೆ ಉತ್ತರ ಪ್ರದೇಶದಲ್ಲಿ 2014 ರ ಲೋಕಸಭಾ ಚುನಾವಣೆ ಫಲಿತಾಂಶ ಮರುಕಳಿಸದು ಎಂದು ಸಿಎಲ್ಎಸ್ಎ ಸಮೀಕ್ಷೆ ಹೇಳಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಈಗಲೂ ಜನಪ್ರಿಯ ನಾಯಕ ಹೌದು ಆದರೆ ಉತ್ತರ ಪ್ರದೇಶದಲ್ಲಿ 2014 ರ ಲೋಕಸಭಾ ಚುನಾವಣೆ ಫಲಿತಾಂಶ ಮರುಕಳಿಸದು ಎಂದು ಸಿಎಲ್ಎಸ್ಎ ಸಮೀಕ್ಷೆ ಹೇಳಿದೆ. 
ಮಾರುಕಟ್ಟೆ ಸಂಶೋಧನೆ ಹಾಗೂ ದಳ್ಳಾಳಿ ಸಂಸ್ಥೆ ಸಿಎಲ್ಎಸ್ಎ ಉತ್ತರ ಪ್ರದೇಶದಲ್ಲಿ ಎರಡು ವಾರ ನಿರಂತರ ಸಮೀಕ್ಷೆ ನಡೆಸಿದ್ದು, ಬಿಜೆಪಿ ಉತ್ತರ ಪ್ರದೇಶದ ಅರ್ಧದಷ್ಟು ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯ ಎಂದು ಸಮೀಕ್ಷೆ ವರದಿ ಹೇಳಿದೆ. 
ಇದೇ ವೇಳೆ ಪುಲ್ವಾಮ ದಾಳಿಯೂ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಸಮೀಕ್ಷೆ ಹೇಳಿದೆ. "ಪ್ರಧಾನಿ ನರೇಂದ್ರ ಮೋದಿ ಈಗಲೂ ಜನಪ್ರಿಯ ನಾಯಕ, ಆದರೆ 2014 ರ ಚುನಾವಣೆ ರೀತಿಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸುವುದು ಕಷ್ಟ ಸಾಧ್ಯ" ಎಂದು ಸಮೀಕ್ಷೆ ಹೇಳಿದೆ. 
ಬಿಜೆಪಿಗೆ 80 ಲೋಕಸಭಾ ಕ್ಷೇತ್ರಗಳಲ್ಲಿ 40-45 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿದೆ. ಮೋದಿ ಜನಪ್ರಿಯತೆ ಒಂದಷ್ಟು ಮತಗಳಾಗಿ ಪರಿವರ್ತನೆಯಾಗಬಹುದು. ಈ ನಡುವೆ ಪ್ರಿಯಾಂಕ ಗಾಂಧಿ ಅವರ ರಾಜಕೀಯ ಎಂಟ್ರಿ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾವ ಮೂಡಿಸಿದ್ದು, ಎಸ್-ಪಿ-ಬಿಎಸ್ ಪಿ ಮೈತ್ರಿಗೆ ಒಂದಷ್ಟು ಹೊಡೆತ ನೀಡಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಕಾಂಗ್ರೆಸ್ ಗೆ ಸಾಧ್ಯವಿದೆ ಎಂದು ಸಿಎಲ್ಎಸ್ಎ ವರದಿ ಹೇಳಿದೆ.
ಗೋ ರಕ್ಷಣೆ ಹೆಸರಿನಲ್ಲಿ ನಡೆದ ಘಟನೆಗಳು ರೈತರಲ್ಲಿ ಬೇಸರ ಮೂಡಿಸಿದ್ದು ಇದು ಆಡಳಿತಾರೂಢ ಪಕ್ಷದ ವಿರುದ್ಧ ಮತಗಳು ಚಲಾವಣೆಯಾಗುವುದಕ್ಕೆ ಸಾಧ್ಯವಿರುವ ಪ್ರಮುಖ ಅಂಶವಾಗಬಹುದು. ಗೋರಕ್ಷಣೆ ಹೆಸರಿನಲ್ಲಿ ನಡೆದಿರುವ ಅತಿರೇಕಗಳಿಂದ ಗೋವುಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ದನಗಳ ಸಂಖ್ಯೆ ಹೆಚ್ಚುತ್ತಿದ್ದು, ಇದು ಕೃಷಿ ವಲಯದಲ್ಲಿ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ ಎಂಬುದು ಕೆಲವರ ಬೇಸರಕ್ಕೆ ಕಾರಣ ಎಂದು ಸಿಎಲ್ಎಸ್ಎ ವರದಿಯಲ್ಲಿ ಹೇಳಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT