ಮೋದಿ ಜನಪ್ರಿಯ ಹೌದು ಆದರೆ ಉತ್ತರ ಪ್ರದೇಶದಲ್ಲಿ 2014 ರ ಫಲಿತಾಂಶ ಮರುಕಳಿಸದು! 
ದೇಶ

ಮೋದಿ ಜನಪ್ರಿಯ ಹೌದು ಆದರೆ ಉತ್ತರ ಪ್ರದೇಶದಲ್ಲಿ 2014 ರ ಫಲಿತಾಂಶ ಮರುಕಳಿಸದು!

ಪ್ರಧಾನಿ ನರೇಂದ್ರ ಮೋದಿ ಈಗಲೂ ಜನಪ್ರಿಯ ನಾಯಕ ಹೌದು ಆದರೆ ಉತ್ತರ ಪ್ರದೇಶದಲ್ಲಿ 2014 ರ ಲೋಕಸಭಾ ಚುನಾವಣೆ ಫಲಿತಾಂಶ ಮರುಕಳಿಸದು ಎಂದು ಸಿಎಲ್ಎಸ್ಎ ಸಮೀಕ್ಷೆ ಹೇಳಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಈಗಲೂ ಜನಪ್ರಿಯ ನಾಯಕ ಹೌದು ಆದರೆ ಉತ್ತರ ಪ್ರದೇಶದಲ್ಲಿ 2014 ರ ಲೋಕಸಭಾ ಚುನಾವಣೆ ಫಲಿತಾಂಶ ಮರುಕಳಿಸದು ಎಂದು ಸಿಎಲ್ಎಸ್ಎ ಸಮೀಕ್ಷೆ ಹೇಳಿದೆ. 
ಮಾರುಕಟ್ಟೆ ಸಂಶೋಧನೆ ಹಾಗೂ ದಳ್ಳಾಳಿ ಸಂಸ್ಥೆ ಸಿಎಲ್ಎಸ್ಎ ಉತ್ತರ ಪ್ರದೇಶದಲ್ಲಿ ಎರಡು ವಾರ ನಿರಂತರ ಸಮೀಕ್ಷೆ ನಡೆಸಿದ್ದು, ಬಿಜೆಪಿ ಉತ್ತರ ಪ್ರದೇಶದ ಅರ್ಧದಷ್ಟು ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯ ಎಂದು ಸಮೀಕ್ಷೆ ವರದಿ ಹೇಳಿದೆ. 
ಇದೇ ವೇಳೆ ಪುಲ್ವಾಮ ದಾಳಿಯೂ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಸಮೀಕ್ಷೆ ಹೇಳಿದೆ. "ಪ್ರಧಾನಿ ನರೇಂದ್ರ ಮೋದಿ ಈಗಲೂ ಜನಪ್ರಿಯ ನಾಯಕ, ಆದರೆ 2014 ರ ಚುನಾವಣೆ ರೀತಿಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸುವುದು ಕಷ್ಟ ಸಾಧ್ಯ" ಎಂದು ಸಮೀಕ್ಷೆ ಹೇಳಿದೆ. 
ಬಿಜೆಪಿಗೆ 80 ಲೋಕಸಭಾ ಕ್ಷೇತ್ರಗಳಲ್ಲಿ 40-45 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿದೆ. ಮೋದಿ ಜನಪ್ರಿಯತೆ ಒಂದಷ್ಟು ಮತಗಳಾಗಿ ಪರಿವರ್ತನೆಯಾಗಬಹುದು. ಈ ನಡುವೆ ಪ್ರಿಯಾಂಕ ಗಾಂಧಿ ಅವರ ರಾಜಕೀಯ ಎಂಟ್ರಿ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾವ ಮೂಡಿಸಿದ್ದು, ಎಸ್-ಪಿ-ಬಿಎಸ್ ಪಿ ಮೈತ್ರಿಗೆ ಒಂದಷ್ಟು ಹೊಡೆತ ನೀಡಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಕಾಂಗ್ರೆಸ್ ಗೆ ಸಾಧ್ಯವಿದೆ ಎಂದು ಸಿಎಲ್ಎಸ್ಎ ವರದಿ ಹೇಳಿದೆ.
ಗೋ ರಕ್ಷಣೆ ಹೆಸರಿನಲ್ಲಿ ನಡೆದ ಘಟನೆಗಳು ರೈತರಲ್ಲಿ ಬೇಸರ ಮೂಡಿಸಿದ್ದು ಇದು ಆಡಳಿತಾರೂಢ ಪಕ್ಷದ ವಿರುದ್ಧ ಮತಗಳು ಚಲಾವಣೆಯಾಗುವುದಕ್ಕೆ ಸಾಧ್ಯವಿರುವ ಪ್ರಮುಖ ಅಂಶವಾಗಬಹುದು. ಗೋರಕ್ಷಣೆ ಹೆಸರಿನಲ್ಲಿ ನಡೆದಿರುವ ಅತಿರೇಕಗಳಿಂದ ಗೋವುಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ದನಗಳ ಸಂಖ್ಯೆ ಹೆಚ್ಚುತ್ತಿದ್ದು, ಇದು ಕೃಷಿ ವಲಯದಲ್ಲಿ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ ಎಂಬುದು ಕೆಲವರ ಬೇಸರಕ್ಕೆ ಕಾರಣ ಎಂದು ಸಿಎಲ್ಎಸ್ಎ ವರದಿಯಲ್ಲಿ ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

2013ರ ಲೈಂಗಿಕ ದೌರ್ಜನ್ಯ ಪ್ರಕರಣ: Tehelka ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್‌ ಶಾಕ್‌; 2 ವಾರಗಳಲ್ಲಿ ಶರಣಾಗುವಂತೆ ಖಡಕ್ ಸೂಚನೆ..!

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ಕಾಶ್ಮೀರಿ ಪಂಡಿತರ ನರಮೇಧ: 28 ವರ್ಷಗಳ ಬಳಿಕ Wandhama ಕೇಸ್ ಫೈಲ್ ರೀ-ಓಪನ್, ತನಿಖೆ ಪುನರಾರಂಭ..!

ಹಿರಿಯೂರು ಬಳಿ ಸಮರ್ಥ್ ಶಾಮನೂರು ಕಾರು ಅಪಘಾತ: ಕಾಂಗ್ರೆಸ್ ಶಾಸಕ ಅಪಾಯದಿಂದ ಪಾರು!