ವೈಮಾನಿಕ ದಾಳಿ: ಮಿರಾಜ್ ಮೇಲೆ ಪ್ರತಿದಾಳಿಗೆ ಯತ್ನಿಸಿದ್ದ ಪಾಕ್ ಫೈಟರ್ ಜೆಟ್ ಗಳ ಹಿಮ್ಮೆಟ್ಟಿಸಿದ ಆ ಶಕ್ತಿ ಯಾವುದು ಗೊತ್ತೇ? 
ದೇಶ

ಮಿರಾಜ್ ಮೇಲೆ ಪ್ರತಿದಾಳಿಗೆ ಯತ್ನಿಸಿದ್ದ ಪಾಕ್ ಫೈಟರ್ ಜೆಟ್ ಗಳ ಹಿಮ್ಮೆಟ್ಟಿಸಿದ ಆ ಶಕ್ತಿ ಯಾವುದು ಗೊತ್ತೇ?

ಪಾಕಿಸ್ತಾನದ ಒಳ ನುಗ್ಗಿ ಉಗ್ರರ ಹುಟ್ಟದಗಿಸಿದ ಭಾರತೀಯ ವಾಯುಪಡೆ ವೈಮಾನಿಕ ದಾಳಿ ಬಗ್ಗೆ ಜಗತ್ತೇ ಮಾತನಾಡುತ್ತಿದ್ದು, ಹಲವು ಸಂಗತಿಗಳು ಗಮನ ಸೆಳೆಯುತ್ತಿವೆ. ಈ ಪೈಕಿ ಪಾಕಿಸ್ತಾನದ ಪ್ರತಿದಾಳಿಯ ವಿಫಲ

ನವದೆಹಲಿ: ಪಾಕಿಸ್ತಾನದ ಒಳ ನುಗ್ಗಿ ಉಗ್ರರ ಹುಟ್ಟದಗಿಸಿದ ಭಾರತೀಯ ವಾಯುಪಡೆ ವೈಮಾನಿಕ ದಾಳಿ ಬಗ್ಗೆ ಜಗತ್ತೇ ಮಾತನಾಡುತ್ತಿದ್ದು, ಹಲವು ಸಂಗತಿಗಳು ಗಮನ ಸೆಳೆಯುತ್ತಿವೆ. ಈ ಪೈಕಿ ಪಾಕಿಸ್ತಾನದ ಪ್ರತಿದಾಳಿಯ ವಿಫಲ ಯತ್ನವೂ ಒಂದು. 
ಬಾಂಬ್ ದಾಳಿ ನಡೆಸಲು ಸಜ್ಜಾಗಿದ್ದ ಮಿರಾಜ್-2000 ಫೈಟರ್ ಜೆಟ್, ಎಲ್ಒಸಿ ದಾಟುತ್ತಿದ್ದಂತೆಯೇ ಎಚ್ಚೆತ್ತ ಪಾಕಿಸ್ತಾನದ ಎಫ್-16 ಮಿರಾಜ್ ಮೇಲೆ ದಾಳಿ ನಡೆಸಲು ಯತ್ನಿಸಿದ್ದವು. ಆದರೆ ಪಾಕಿಸ್ತಾನದ ಎಫ್-16 ಫೈಟರ್ ಗಳು ಮಿರಾಜ್-2000 ಮಿಂಚಿನ ವೇಗದ ತೀವ್ರತೆಗೆ ಹೆದರಿ ತನ್ನ ಸೇನಾ ನೆಲೆಗೆ ವಾಪಸ್ಸಾಗಿತ್ತು. ಈ ರೀತಿ ಪಾಕಿಸ್ತಾನದ ಎಫ್-16 ಗಳು ಭಾರತದ ಮಿರಾಜ್-2000 ಮೇಲೆ ದಾಳಿ ನಡೆಸದೇ ಹಿಮ್ಮೆಟ್ಟುವುದಕ್ಕೆ   ವಾಯುಪಡೆ ತಯಾರಿಸಿದ್ದ ಸಮರ್ಥ ಫೈಟರ್ ಜೆಟ್ ಗಳ ವ್ಯೂಹವೇ ಕಾರಣ ಎಂದು ಹೇಳಲಾಗಿತ್ತಿದೆ. ಪ್ರಾರಂಭದಲ್ಲಿ ಭಾರತದ ಫೈಟರ್ ಜೆಟ್ ಗಳ ಸಂಖ್ಯೆಯ ಬಗ್ಗೆ ನಿಖರತೆ ಇಲ್ಲದೇ ಪ್ರತಿ ದಾಳಿಗೆ ಯತ್ನಿಸಿದ್ದ ಪಾಕಿಸ್ತಾನ ಭಾರತೀಯ ವಾಯುಪಡೆಯ ಫೈಟರ್ ಜೆಟ್ ಗಳ ವ್ಯೂಹದ ರಚನೆ ನೋಡಿ ದಂಗಾಗಿತ್ತಂತೆ. 
ಪಾಕಿಸ್ತಾನದ ಪ್ರತಿ ದಾಳಿ ಎದುರಿಸಲು ತಯಾರಿಗಿ ಕಾರ್ಯಾಚರಣೆ ಪ್ರಾರಾಂಭಿಸಿದ್ದ ಭಾರತ ವಾಯುಪಡೆ ಮಿರಾಜ್-2000 ಜೊತೆಗೆ ಶಕ್ತಿಶಾಲಿ ಫೈಟರ್ ಜೆಟ್ ಸುಖೋಯ್-30 ಎಂಕೆಐ ಹಾಗೂ ನೇತ್ರ ಎಇಡಬ್ಲ್ಯೂ ಆಂಡ್ ಸಿ ಹಾಗೂ ಹಿರೋನ್ ಡ್ರೋನ್ ಗಳನ್ನೂ ಬಳಸಿಕೊಂಡಿತ್ತು. ಬಾಂಬಿಂಗ್ ಕಾರ್ಯಾಚರಣೆ ವೇಳೆ ಮಿರಾಜ್-2000 ಮೇಲೆ ದಾಳಿ ನಡೆಸಲು ಯತ್ನಿಸಿದರೆ ಸುಖೋ-30 ಹಾಗೂ ಡ್ರೋಣ್ ಗಳು ಮತ್ತೊಂದು ಬದಿಯಿಂದ ಪ್ರತಿ ದಾಳಿಗೆ ಸಿದ್ಧವಾಗಿದ್ದವು. ಇದನ್ನು ಅರಿತ ಪಾಕಿಸ್ತಾನದ ಎಫ್-16 ವಿಮಾನಗಳು ಪ್ರತಿದಾಳಿ ನಡೆಸಲು ಹೆದರಿ ವಾಪಸ್ಸಾಗಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT