ವೈಮಾನಿಕ ದಾಳಿಯಲ್ಲಿ ಕಾಶ್ಮೀರದ ಉಗ್ರ ಕಾರ್ಯಾಚರಣೆ ಮುಖ್ಯಸ್ಥ ಹತ್ಯೆ ಸಾಧ್ಯತೆ
Nagaraja AB
ಬಾಲಕೋಟ್ : ಭಾರತ ವಾಯುಸೇನೆ ಇಂದು ನಡೆಸಿದ ಏರ್ ಸ್ಟ್ರೇಕ್ ನಲ್ಲಿ ಜೈಷ್ -ಇ- ಮೊಹಮ್ಮದ್ ಸಂಘಟನೆಯ ಉಗ್ರ , ಕಾಶ್ಮೀರದ ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿದ್ದ ಮುಫ್ತಿ ಅಜಾರ್ ಖಾನ್ ಮೇಲೂ ದಾಳಿ ನಡೆಸಲಾಗಿದೆ. ಆತನು ಸಹ ಹತನಾಗಿರುವ ಸಾಧ್ಯತೆ ಇದೆ. ಆದರೆ , ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ.
ಬಾಲಕೋಟ್ ನಲ್ಲಿ ಜೈಷ್ -ಇ- ಮೊಹಮ್ಮದ್ ಉಗ್ರರು ಅಡಗಿದ ನೆಲೆಗಳ ಚಿತ್ರಗಳು ಲಭ್ಯವಾಗಿದ್ದು, ಭಾರತೀಯ ವಾಯುಸೇನೆ ಧ್ವಂಸಗೊಳಿಸಿರುವ ಉಗ್ರರ ನೆಲೆಗಳ ಮೆಟ್ಟಿಲುಗಳ ಮೇಲೆ ಅಮೆರಿಕಾ, ಇಂಗ್ಲೆಂಡ್ ಹಾಗೂ ಇಸ್ರೇಲ್ ರಾಷ್ಟ್ರಗಳ ರಾಷ್ಟ್ರ ಧ್ವಜದ ಚಿತ್ರ ಕಂಡುಬಂದಿದೆ.