ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ವಾಯುಪಡೆ ಮುಂಜಾನೆ 3.30ರ ಸುಮಾರಿಗೆ ಪಾಕ್ ನೆಲದಲ್ಲಿ ಏರ್ ಸ್ಟ್ರೈಕ್ ನಡೆಸಿದ್ದು ಇದಕ್ಕೆ ದೇಶವ್ಯಾಪಿ ಮೆಚ್ಚುಗೆ ವ್ಯಕ್ತವಾಗಿದ್ದು ರಾಜಕೀಯ ನಾಯಕರು ಟ್ವೀಟ್ ಮಾಡಿ ಯೋಧರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟ್ವೀಟರ್ ನಲ್ಲಿ ಐಎಎಫ್ ಅಂದರೆ ಇಂಡಿಯನ್ಸ್ ಅಮೇಜಿಂಗ್ ಫೈಟರ್ಸ್. ಜೈ ಹಿಂದ್ ಎನ್ನುವ ಮೂಲಕ ಉಗ್ರ ಮೇಲೆ ದಾಳಿ ಮಾಡಿದ ವಾಯು ಪಡೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.