ಸಂಗ್ರಹ ಚಿತ್ರ 
ದೇಶ

ಜನರು ನಮ್ಮನ್ನು ನೋಡಿ ನಗುತ್ತಿದ್ದಾರೆ, ಸಂಸತ್ತಿನ ವರ್ಚಸ್ಸು ಹಾಳಾಗುತ್ತಿದೆ: ರಾಜ್ಯಸಭೆ ಗದ್ದಲ ಕುರಿತು ಸಭಾಪತಿ

ಸಂಸತ್ತಿನಲ್ಲಿ ನಾಯಕರ ಗದ್ದಲವನ್ನು ನೋಡಿ ಜನರು ನಗುತ್ತಿದ್ದಾರೆ, ಸಂಸತ್ತಿನ ವರ್ಚಸ್ಸು ಹಾಳಾಗುತ್ತಿದೆ ಎಂದು ರಾಜ್ಯಸಭೆಯಲ್ಲಿ ಮುಂದುವರೆದ ಗದ್ದಲ ಕುರಿತು ಸಭಾಪತಿ ವೆಂಕಯ್ಯ ನಾಯ್ಡು ಅವರು ಬುಧವಾರ ತೀವ್ರ...

ನವದೆಹಲಿ: ಸಂಸತ್ತಿನಲ್ಲಿ ನಾಯಕರ ಗದ್ದಲವನ್ನು ನೋಡಿ ಜನರು ನಗುತ್ತಿದ್ದಾರೆ, ಸಂಸತ್ತಿನ ವರ್ಚಸ್ಸು ಹಾಳಾಗುತ್ತಿದೆ ಎಂದು ರಾಜ್ಯಸಭೆಯಲ್ಲಿ ಮುಂದುವರೆದ ಗದ್ದಲ ಕುರಿತು ಸಭಾಪತಿ ವೆಂಕಯ್ಯ ನಾಯ್ಡು ಅವರು ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ತ್ರಿವಳಿ ತಲಾಖ್ ಹಾಗೂ ವಂದೇ ಮಾತರಂ ವಿವಾದ ಸಂಬಂಧ ರಾಜ್ಯಸಭೆಯಲ್ಲಿ ತೀವ್ರ ಗದ್ದಲ ಉಂಟಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸಭಾಪತಿಗಳು ಪದೇ ಪದೇ ಅಧಿವೇಶನವನ್ನು ಮುಂದೂಡುತ್ತಿದ್ದಾರೆ. 
ಪದೇ ಪದೇ ಗದ್ದಲ ಎದುರಾಗುತ್ತಿರುವ ಹಿನ್ನಲೆಯಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿರುವ ವೆಂಕಯ್ಯ ನಾಯ್ಡು ಅವರು, ಸಂಸತ್ತಿನ ವರ್ಚಸ್ಸು ಹಾಳಾಗುತ್ತಿದೆ. ನಮ್ಮನ್ನು ನೋಡಿ ಜನರು ನಗುತ್ತಿದ್ದಾರೆಂದು ಹೇಳುವ ಮೂಲಕ ಪ್ರತಿಭಟನೆಗಿಳಿದಿದ್ದ ಹಲವು ಸಂಸದರನ್ನು ಮೌನವಾಗಿರುವಂತೆ ಮಾಡಿದರು. 
ರಾಜ್ಯಸಭೆ ಕಲಾಪ ಸುಗಮವಾಗಿ ಸಾಗಲು ದಯವಿಟ್ಟು ಸಹಕರಿಸಿ. ಅಧಿವೇಶನ ಅರ್ಥಪೂರ್ಣವಾಗಿ ಸಾಗಬೇಕು. ಹಲವು ವಿಚಾರಗಳ ಬಗ್ಗೆ ಚರ್ಚೆಗಳು ಬಾಕಿಯಿದೆ. ಸಮಸ್ಯೆಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT